Advertisement

ಕುಕ್ಕೆ ಶ್ರೀ ಸುಬ್ರಹ್ಮಣ್ಯ: ಸಡಗರದ ಕಿರುಷಷ್ಠಿ ರಥೋತ್ಸವ

01:52 AM Dec 29, 2022 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಬುಧವಾರ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವವು ಭಕ್ತಿ ಸಡಗರದಿಂದ ನೆರವೇರಿತು. ಸಹಸ್ರಾರು ಸಂಖ್ಯೆಯ ಭಕ್ತರ ಉಪ ಸ್ಥಿತಿಯಲ್ಲಿ ಶ್ರೀ ದೇವರ ಉತ್ಸವ ಜರಗಿತು.
ರಥಾರೋಹಣದ ಬಳಿಕ ಶ್ರೀ ದೇಗುಲದ ಪ್ರಧಾನ ಅರ್ಚಕ ವೇ| ಮೂ| ಸೀತಾರಾಮ ಎಡಪಡಿತ್ತಾಯ ಅವರು ಶ್ರೀ ದೇವರಿಗೆ ಪೂಜೆ ನೆರವೇರಿಸಿದರು.

Advertisement

ಕಿರುಷಷ್ಠಿ ಕಟ್ಟೆ ಪೂಜೆ
ಆ ಬಳಿಕ ಸವಾರಿ ಮಂಟಪದ ಕಿರುಷಷ್ಠಿ ಕಟ್ಟೆಯಲ್ಲಿ ದೇವರಿಗೆ ಪೂಜೆ ನೆರವೇರಿತು. ಈ ಸಂದರ್ಭ ಆಕರ್ಷಕ ಸುಡುಮದ್ದು ಪ್ರದರ್ಶನವಿತ್ತು. ಹೊರಾಂಗಣದಲ್ಲಿ ಪಾಲಕಿ ಉತ್ಸವ, ಬಂಡಿ ಉತ್ಸವ, ಸಂಗೀತ ವಾದ್ಯಗಳ ಉತ್ಸವ ನಡೆಯಿತು. ಕೇರಳ ಶೈಲಿಯ ಚೆಂಡೆ ವಾದನ ಕೂಡ ನಡೆಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಸದಸ್ಯರಾದ ಪಿ.ಜಿ.ಎಸ್‌. ಎನ್‌. ಪ್ರಸಾದ್‌, ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್‌, ವನಜಾ ವಿ. ಭಟ್‌, ಲೋಕೇಶ್‌ ಮುಂಡುಕಜೆ, ಎಇಒ ಪುಷ್ಪಲತಾ ರಾವ್‌, ಮಾಸ್ಟರ್‌ ಪ್ಲ್ರಾನ್‌ ಸಮಿತಿ ಸದಸ್ಯರಾದ ಮನೋಜ್‌ ಸುಬ್ರಹ್ಮಣ್ಯ, ಡಾ| ಚಂದ್ರಶೇಖರ ನಲ್ಲೂ ರಾಯ, ಚಂದ್ರಶೇಖರ ಮರ್ದಾಳ, ಕಿಶೋರ್‌ ಕುಮಾರ್‌ ಕೂಜುಗೋಡು, ದೇಗುಲದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್‌, ಅಭಿಯಂತರ ಉದಯ ಕುಮಾರ್‌ ಉಪಸ್ಥಿತರಿದ್ದರು.

53 ಮಂದಿಯಿಂದ
ಎಡೆಸ್ನಾನ ಸೇವೆ
ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಬುಧವಾರ ಮಧ್ಯಾಹ್ನ 53 ಭಕ್ತರು ಸ್ವಯಂ ಪ್ರೇರಿತರಾಗಿ ಎಡೆಸ್ನಾನ ಸೇವೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next