Advertisement

ಕುಕ್ಕೆ: ಸಿದ್ಧವಾಗುತ್ತಿದೆ ಪಾರಂಪರಿಕ ಶಿಲ್ಪ ವೈಭವದ ಬ್ರಹ್ಮರಥ

11:05 PM Sep 01, 2019 | Sriram |

 ವಿಶೇಷ ವರದಿ-ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬ್ರಹ್ಮರಥವು ಈಗಿನ 400 ವರ್ಷಗಳ ಪುರಾತನವಾದ ರಥದ ಪ್ರಾಚೀನ ಶಿಲ್ಪ ಕಲೆಗೆ ಧಕ್ಕೆ ಬರದಂತೆ ಅದೇ ಆಯ, ಅಳತೆ ಶಾಸ್ತ್ರಗಳ ತದ್ರೂಪದಲ್ಲಿ ಕೋಟೇಶ್ವರದಲ್ಲಿ ನಿರ್ಮಾಣವಾಗುತ್ತಿದೆ.

Advertisement

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ಶಿಲ್ಪಿ ರಾಜಗೋಪಾಲ ನೇತೃತ್ವದಲ್ಲಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಬ್ರಹ್ಮರಥ ನಿರ್ಮಾಣಗೊಂಡಿದೆ. ನವರಾತ್ರಿ ಆರಂಭವಾಗುವ ಸೆ. 29ರ ರಾತ್ರಿ ಚಿತ್ತ ನಕ್ಷತ್ರದ ಶುಭ ಮುಹೂರ್ತದಲ್ಲಿ ರಥವನ್ನು ಕುಕ್ಕೆಗೆ ತರಲಾಗುತ್ತಿದೆ. ಅತ್ಯಲ್ಪ ಅವಧಿಯ ಏಳು ತಿಂಗಳಲ್ಲಿ ಶಿಲ್ಲಿಗಳ ಕಲಾ ನೈಪುಣ್ಯದಿಂದ ಹೊರಹೊಮ್ಮಿದ ರಥ ಸುಂದರವಾಗಿ ಮೂಡಿಬಂದಿದೆ.

ರಥದ ವಿಶೇಷ
ನೆಲದಿಂದ ರಥದ ಜಿಡ್ಡೆಯ ತನಕ 17 ಅಡಿ ಎತ್ತರ, ಅಗಲ, ಉದ್ದ ಇರಲಿದೆ. 6 ಚಕ್ರಗಳಿದ್ದು ಚಕ್ರ 8 ಅಡಿ ಎತ್ತರವಿದೆ. ರಥ ನೆಲದಿಂದ ಕಲಶದ ತುದಿವರೆಗೆ 63 ಅಡಿ ಎತ್ತರವಿರುತ್ತದೆ. ರಥ ಅಂದಾಜು 22 ಟನ್‌ ಭಾರವಿರಲಿದೆ. 16 ಅಂತಸ್ತುಗಳನ್ನು ಹೊಂದಿದ್ದು, ವಿವಿಧ ಜಾತಿಯ 2000 ಸಿಎಫ್ಎಫ್ ಮರ ಬಳಸಿಕೊಳ್ಳಲಾಗಿದೆ. ಉತ್ತರ ಭಾರತದಿಂದ ಸಾಗುವಾನಿ, ಗುಜರಾತಿನಿಂದ ಬೋಗಿ ಮರ ಹಾಗೂ ಸುಬ್ರಹ್ಮಣ್ಯ ಪ್ರಾಂತದಿಂದ ಕಿಲಾರ್‌ ಬೋಗಿ ಮರವನ್ನು ಬಳಸಿಕೊಳ್ಳಲಾಗಿದೆ.

ರಥದಲ್ಲಿ ಚತುರ್ವಂಶಿ ವಿಗ್ರಹ, ಶಿವ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಲೀಲಾವಲಿಗಳು, ಅಷ್ಟ ದಿಕಾ³ಲರು, ಮಹಾಭಾರತ, ಪಾರ್ವತಿ ಕಲ್ಯಾಣ, ದಕ್ಷ ಯಜ್ಞ, ಪುತ್ರ ಕಾಮೇಷ್ಠಿ ಯಾಗ ಹಾಗೂ ಪ್ರಪಂಚದ ಸಕಲ ಜೀವರಾಶಿಗಳಿರುವ ಸಹಸ್ರಾರು ಚಿತ್ರಗಳ ಕೆತ್ತನೆಯಿಂದ ಕೂಡಿದೆ. ದೇವತೆಗಳು ಹಾಗೂ ದೇವರನ್ನು ಅತ್ಯಂತ ನಾಜೂಕಾಗಿ ಕೆತ್ತಲಾಗಿದ್ದು, ರಥ ಗಮನ ಸೆಳೆಯುತ್ತಿದೆ.

ರಥವು ನೆಗಳನ ಆನೆಕಾಲು, ಸಿಂಹಗಳು ಕೇನೆ ಅಡ್ಡಗಾಲು ಇತ್ಯಾದಿ ಇದೆ. ನಾಲ್ಕು ದಿಕ್ಕುಗಳಲ್ಲಿ ದ್ವಾರಪಾಲಕರು, ಕೆತ್ತನೆ, ಶಿಲ್ಪಗಳು ಶಿಲ್ಪಿಗಳ ಕಲಾ ಕುಸುರಿಗೆ ಸಾಕ್ಷಿಯಾಗಿವೆ. ಹಲವು ವೈಶಿಷ್ಟéಗಳ ಚಿತ್ರ ರಥದ ಸುತ್ತ ಮೂಡಿಬಂದಿವೆ. ಕಲೆಗಾಗಿ ಸಾಗುವಾನಿ ಮರ ಬಳಸಿಕೊಳ್ಳಲಾಗಿದೆ. ಚಕ್ರ ಮತ್ತು ಅಚ್ಚಿಗೆ ಬೋಗಿ ಮರ ಉಪಯೋಗಿಸಲಾಗಿದೆ.

Advertisement

 ಅನುಮತಿ ಪ್ರಕ್ರಿಯೆ
ನಿರೀಕ್ಷಿತ ಆವಧಿಯಲ್ಲಿ ರಥ ಸುಂದರ ರೂಪ ಪಡೆದು ಹೊರಹೊಮ್ಮಿದೆ. ಕೋಟೇಶ್ವರದಿಂದ ರಥವನ್ನು ಕುಕ್ಕೆಗೆ ತರುವ ಕುರಿತು ಸಿದ್ಧತೆಗಳನ್ನು ನಡೆಸುತ್ತಿದ್ದೇವೆ. ಇಲಾಖಾವಾರು ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.
– ನಿತ್ಯಾನಂದ ಮುಂಡೋಡಿ
ಅಧ್ಯಕ್ಷರು, ಕುಕ್ಕೆ ದೇಗುಲ ವ್ಯವಸ್ಥಾಪನ ಸಮಿತಿ

 116ನೇ ರಥ
1969ರಲ್ಲಿ ರಥ ನಿರ್ಮಾಣ ಕೆಲಸ ಆರಂಭಿಸಿದ್ದೆವು. ಇಂದು 116ನೇ ರಥವಾಗಿ ಕುಕ್ಕೆ ಸುಬ್ರಹ್ಮಣ್ಯದ ಬ್ರಹ್ಮರಥ ನಿರ್ಮಿಸಿ ಕೊಡುತ್ತಿದ್ದೇವೆ. ಇದೊಂದು ಅತ್ಯದ್ಭುತ ಅನುಭವ ನೀಡಿದೆ. ಶೀಘ್ರ ಹಸ್ತಾಂತರಿಸುತ್ತಿದ್ದೇವೆ.
– ರಾಜಗೋಪಾಲ
ರಥದ ಶಿಲ್ಪಿ, ಕೊಟೇಶ್ವರ

ರಥ ಸಮರ್ಪಣೆ ವಿಳಂಬ
ರಥ ಕುಕ್ಕೆಗೆ ಅಕ್ಟೋಬರ್‌ನಲ್ಲಿ ತಲುಪಿದರೂ ರಥ ಸಮರ್ಪಣೆಗೆ ದೀಪಾವಳಿ ತನಕ ಕಾಯಬೇಕಿದೆ. ದೀಪಾವಳಿ ಸಂದರ್ಭ ದೇವರ ಉತ್ಸವಗಳು ಬೀದಿಗೆ ಬರಲಿದ್ದು, ಅಲ್ಲಿಯ ತನಕ ಸಮರ್ಪಣೆ ಅಸಾಧ್ಯ. ರಥಕ್ಕೆ ಸಂಬಂಧಿಸಿ ಉಳಿದ ಕೆಲಸ ಕಾರ್ಯಗಳು ನಡೆದು ದೀಪಾವಳಿ ಸಂದರ್ಭ (ನವೆಂಬರ್‌) ರಥ ಸಮರ್ಪಣೆಯಾಗಲಿದೆ. ಡಿಸೆಂಬರ್‌ನಲ್ಲಿ ನಡೆಯುವ ಚಂಪಾ ಷಷ್ಠಿ ಸಂದರ್ಭ ನೂತನ ಬ್ರಹ್ಮರಥದಲ್ಲಿ ದೇವರು ಆರೋಹಣರಾಗುವರು.

Advertisement

Udayavani is now on Telegram. Click here to join our channel and stay updated with the latest news.

Next