Advertisement

Kudur: ಸಾರಿಗೆ ಬಸ್ಸು- ಬೈಕ್ ಮುಖಾಮುಖಿ ಢಿಕ್ಕಿ; ಸವಾರ ಸಾವು

02:22 PM Jan 11, 2024 | Team Udayavani |

ಕುದೂರು: ಕೆ.ಎಸ್.ಆರ್.ಟಿ.ಸಿ ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕ್ ಸವಾರನೂಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ ಸೂಲೂರಿನ ರೈಲ್ವೆ ಬ್ರಿಡ್ಜ್ ಬಳಿ ಗುರುವಾರ(ಜ.11 ರಂದು) ಸಂಭವಿಸಿದೆ.

Advertisement

ಬೈಕ್ ಸವಾರ ಕುದೂರು ಹೂಬಳಿಯ ಮಲ್ಲಪ್ಪನಹಳ್ಳಿಯ ಗ್ರಾಮದ ಚಲಪತಿ (32) ಮೃತ ದುರ್ಧೈವಿ. ಮೃತ ಚಲಪತಿ ಸೂಲೂರು ಬಳಿ ಇರುವ ಶ್ರೀರಾಮ ಫೈನಾನ್ಸ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ.

ಪ್ರತಿ ದಿನ ಎಂದಿನಂತೆ ಬೆಳಗ್ಗೆ ಎದ್ದು ತನ್ನ ಹೆಂಡತಿಯನ್ನು ಬೈಕ್ ನಲ್ಲಿ ಕರೆದುಕೂಂಡು ಬಂದು ಕುದೂರಿನಲ್ಲಿ ಇಳಿಸಿ ಕೆಲಸಕ್ಕೆ ಹೂಗುವ ಮಾರ್ಗ ಮಧ್ಯೆ ಹೋಗುತ್ತಿದ್ದಾಗ ಸೂಲೂರಿನ ರೈಲ್ವೆ ಬ್ರಿಡ್ಜ್ ಬಳಿ ಅತಿ ವೇಗವಾಗಿ ಬಂದ ಕೆಎಸ್ ಆರ್ ಟಿಸಿ ಬಸ್ಸು ಬೈಕ್ ಗುದ್ದಿದೆ. ಗುದ್ದಿದ ರಭಸಕ್ಕೆ ಬೈಕ್ ಕೆಎಸ್ ಆರ್ ಟಿಸಿ ಬಸ್ ಅಡಿ ಸಿಲುಕಿದೆ. ಬೈಕ್  ಸವಾರ ಪಕ್ಕದಲ್ಲಿ ಇದ್ದ ಬೇಲಿಗೆ ಎಗರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಢಿಕ್ಕಿ ಸಂಭವಿಸುತ್ತಿದ್ದಂತೆ ಕೆಎಸ್ ಆರ್ ಟಿಸಿ ಡ್ರೆವರ್  ಹಾಗೂ ಕಂಡಕ್ಟರ್ ಪರಾರಿ ಆಗಿದ್ದಾರೆ. ಕುದೂರು ಪೂಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next