Advertisement

ಕುದ್ಮಾರು ಶಾಲೆ: ಮತ್ತೆ ತರಗತಿ ಆರಂಭ 

02:30 AM Jul 14, 2017 | Team Udayavani |

ಸವಣೂರು: ಶಿಕ್ಷಣಾಧಿಕಾರಿ ಬಂದು ಶಿಕ್ಷಕಿಯನ್ನು ಮತ್ತೆ ಕುದ್ಮಾರು ಶಾಲೆಗೆ ನಿಯೋಜಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ  ಹೆತ್ತವರು ಪ್ರತಿಭಟನೆ ಕೈ ಬಿಟ್ಟಿದ್ದು ಬುಧವಾರ ಮಕ್ಕಳು ಶಾಲೆಗೆ ಆಗಮಿಸಿದ್ದು, ತರಗತಿ ಎಂದಿನಂತೆ ನಡೆದವು.

Advertisement

ಬೆಳಂದೂರು ಗ್ರಾ.ಪಂ.ಗೆ ಒಳಪಟ್ಟ  ಕುದ್ಮಾರು ಶಾಲೆ ಯಿಂದ ಶಿಕ್ಷಕಿಯೋರ್ವರನ್ನು ಬೇರೆ ಶಾಲೆಗೆ ನಿಯೋಜ ನೆಗೊಳಿಸಿರುವುದನ್ನು ಖಂಡಿಸಿ ಶಾಲಾಭಿವೃದ್ಧಿ ಸಮಿತಿ ಹಾಗೂ ಹೆತ್ತವರು, ಹಿರಿಯ ವಿದ್ಯಾರ್ಥಿಗಳು ಶಾಂತಿ ಯುತ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಅವರು ಬುಧವಾರ ಆಗಮಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ತಮ್ಮ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ  ಬುಧವಾರ ಮಕ್ಕಳನ್ನು ಶಾಲೆಗೆ ಕಳುಹಿಸಿದರು. ಸೋಮ ವಾರದಿಂದ ಹೆತ್ತವರು ಪ್ರತಿಭಟನೆ ನಡೆಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next