Advertisement

ಕುಡ್ಲ ಟಾಕೀಸ್

08:29 PM Apr 24, 2019 | Team Udayavani |

ಕುಡ್ಲದಲ್ಲಿ “ಆಯೆ ಏರ್‌?’

Advertisement

ಆಕರ್ಷಕ ಟೈಟಲ್‌ ಮೂಲಕ ಸುದ್ದಿಯಾಗಿರುವ ಸಿನೆಮಾ “ಆಯೆ ಏರ್‌?’ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಕುತೂಹಲ ಮೂಡಿಸಿದೆ. ಅಂದಹಾಗೆ, ಸಿನೆಮಾದ ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ಅದಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಕೆ. ಮಂಜುನಾಥ್‌ ಅವರದ್ದು ವಿಶೇಷವಾಗಿ ಗಮನ ಸೆಳೆಯುವಂತಹ ಕೆಲಸವನ್ನು ಈ ಸಿನೆಮಾದಲ್ಲಿ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲವೂ ಮಂಜುನಾಥ್‌ ಅವರದ್ದು. ಸಿನೆಮಾದ ನಿರ್ದೇಶನದ ಜವಾಬ್ದಾರಿಯೂ ಇವರದ್ದೇ ಅಗಿದೆ. ಶ್ರೀಕಾಂತ್‌ ರೈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನುಸುತ್ತಿದ್ದಾರೆ. ಅರವಿಂದ ಬೋಳಾರ್‌ ಅವರು ವಿಶೇಷ ಪಾತ್ರದಲ್ಲಿ ಮಿಂಚಲಿದ್ದು, ಭರ್ಜರಿ ನಗುವಿಗೆ ಇಲ್ಲಿ ಯಥೇತ್ಛ ಅವಕಾಶವಿದೆ.

ಮುಂದಿದೆ “ರಾಹುಕಾಲ ಗುಳಿಗ ಕಾಲ’
ಮನೋಜ್‌ ಕುಮಾರ್‌ ಪ್ರಸ್ತುತಿಯ ಸೂರಜ್‌ ಬೋಳಾರ್‌, ಪ್ರೀತಂ ನಿರ್ಮಾಣದ “ರಾಹು ಕಾಲ ಗುಳಿಗ ಕಾಲ’ ಶೂಟಿಂಗ್‌ ಮುಗಿ ಸಿ ಈಗ ಡಬ್ಬಿಂಗ್‌ ಪೂರ್ಣಗೊಳಿಸಿದೆ. ಫೈನಲ್‌ ಟ್ರೈಂಡಿಂಗ್‌ ನಡೆಯುತ್ತಿದೆ. ಮಣಿಕಾಂತ್‌ ಕದ್ರಿ ಸಂಗೀತದ ಜವಾಬ್ದಾರಿ ನಿರ್ವಹಿಸಿದ್ದಾರೆ. ಅರ್ಜುನ್‌ ಕಾಪಿಕಾಡ್‌, ನವ್ಯತಾ ರೈ, ಅರವಿಂದ ಬೋಳಾರ್‌, ವಿಸ್ಮಯ ವಿನಾಯಕ್‌, ಚಂದ್ರಹಾಸ್‌ ಉಳ್ಳಾಲ್‌ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮಾಸ್‌ ಮಾದ ಸಾಹಸದಲ್ಲಿ ಕೈ ಜೋಡಿಸಿದ್ದಾರೆ. ಸಿದ್ದು ಜಿ.ಎಸ್‌. ಛಾಯಾಗ್ರಹಣ ಹಾಗೂ ಸುರೇಶ್‌ ಸಂಕಲನದಲ್ಲಿ ತೊಡಗಿಸಿದ್ದಾರೆ. ಈಗಾಗಲೇ “ಪತ್ತೀಸ್‌ ಗ್ಯಾಂಗ್‌’ ಎಂಬ ಸಿನೆಮಾ ಮಾಡಿದ ಚಿತ್ರತಂಡ ಎರಡನೇ ಸಿನೆಮಾವಾಗಿ ರಾಹು ಕಾಲವನ್ನು ಸಿದ್ಧಪಡಿಸುತ್ತಿದೆ. ಪತ್ತೀಸ್‌ ಗ್ಯಾಂಗ್‌ ಶೂಟಿಂಗ್‌ ಆದ ಕಾಲದಲ್ಲಿಯೇ ರಾಹುಕಾಲದ ಶೂಟಿಂಗ್‌ ಕೂಡ ಮಾಡಲಾಗಿದೆ. ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಸಿನೆಮಾದಲ್ಲಿ, ಶೂಟಿಂಗ್‌ ವೇಳೆಯಲ್ಲಿ ಒರಿಜಿನಲ್‌ ಗನ್‌ ಹಿಡಿದುಕೊಳ್ಳಲಾಗಿದೆ. ಕೋಸ್ಟಲ್‌ವುಡ್‌ನ‌ಲ್ಲಿ ಇದೊಂದು ಮೊದಲ ಪ್ರಯತ್ನ. ಡಮ್ಮಿ ಬುಲೆಟ್‌ ಅಳವಡಿಸಿಕೊಂಡು ಶೂಟಿಂಗ್‌ ನಡೆಸಲಾಗಿದೆ. ಸಿನೆಮಾದಲ್ಲಿ ಒಂದು ಹಾಡಿದೆ. ಒಬ್ಬ ವ್ಯಕ್ತಿಗೆ ಒಂದು ಟೈಮ್‌ ಎದುರಾದರೆ ಆತನ ಕಥೆಯೇ ಬೇರೆ ಆಗುತ್ತದೆ.

“ಕುದ್ಕನ ಮದ್ಮ್’ ಶೂಟಿಂಗ್‌, ಡಬ್ಬಿಂಗ್‌ ಪೂರ್ಣ
ಖ್ಯಾತ ನಿರ್ದೇಶಕ ಎ.ವಿ. ಜಯರಾಜ್‌ ನಿರ್ದೇಶನದ ಕೋಸ್ಟಲ್‌ವುಡ್‌ನ‌ಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ “ಕುದ್ಕನ ಮದ್ಮ್’ ಸಿನೆಮಾ ಶೂಟಿಂಗ್‌ ಆಗಿ, ಡಬ್ಬಿಂಗ್‌ ಪೂರ್ಣಗೊಳಿಸಿದೆ. ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ದೀಪಕ್‌ ರೈ ಪಾಣಾಜೆ, ಕಾರ್ತಿಕ್‌ ರಾವ್‌, ಜೀವನ್‌ ಉಳ್ಳಾಲ್‌ ಸೇರಿದಂತೆ ಹಲವು ಸ್ಟಾರ್‌ ನಟರು ಸಿನೆಮಾದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next