Advertisement

ಕೆಲವೇ ದಿನಗಳಲ್ಲಿ ‘ಕುದ್ಕನ ಮದ್ಮೆ’

11:08 PM Sep 11, 2019 | mahesh |

ಖ್ಯಾತ ನಿರ್ದೇಶಕ ಎ.ವಿ.ಜಯ ರಾಜ್‌ ನಿರ್ದೇಶನದ ಕೋಸ್ಟಲ್‌ವುಡ್‌ನ‌ಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ “ಕುದ್ಕನ ಮದ್ಮೆ’ ಸಿನೆಮಾ ಶೂಟಿಂಗ್‌ ಆಗಿ, ಡಬ್ಬಿಂಗ್‌ ಪೂರ್ಣಗೊಳಿಸಿ ಬಿಡುಗಡೆಯ ತವಕದಲ್ಲಿದೆ.

Advertisement

ನವೀನ್‌ ಡಿ.ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ದೀಪಕ್‌ ರೈ ಪಾಣಾಜೆ, ಕಾರ್ತಿಕ್‌ ರಾವ್‌, ಜೀವನ್‌ ಉಳ್ಳಾಲ್‌ ಸೇರಿದಂತೆ ಹಲವು ಸ್ಟಾರ್‌ ನಟರು ಸಿನೆಮಾ ದಲ್ಲಿ ದ್ದಾರೆ. ಪೃಥ್ವಿ ಅಂಬರ್‌, ದೇವಿಪ್ರಕಾಶ್‌ ಹಾಗೂ ಶೀತಲ್‌ ನಾಯಕ್‌ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕ್ಯಾಮರಾದಲ್ಲಿ ಮಹಾಬಲೇಶ್ವರ ಹೊಳ್ಳ, ಸಂಗೀತದಲ್ಲಿ ರಾಹುಲ್‌ ಕೈಜೋಡಿಸಿದ್ದಾರೆ. ಒಂದೆಡೆ ಮಳೆ ಹಾಗೂ ಬಿಸಿಲು ಒಮ್ಮೆಲೇ ಕಾಣಿಸಿಕೊಂಡಾಗ ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ಮಾತೆಂದರೆ ಕುದ್ಕಕ್‌ ಮದಿಮೆ ಎಂದು. ಹೀಗಾಗಿ ತುಳುನಾಡಿನಾದ್ಯಂತ ಈ ಮಾತು ಬಹು ಜನಜನಿತ. ಆಗುವ ಹೋಗುವ ಮಾತೆಲ್ಲ ಕುದ್ಕನ ಮದ್ಮೆಯ ಹೆಸರೇಳಿದಾಗ ಆಗುವುದಿಲ್ಲ ಎಂದೂ ಕೂಡ ಮಾತನಾಡುವುದಿದೆ.

ವಿಶೇಷವೆಂದರೆ ತುಳುನಾಡಿನ ಪ್ರೀತಿಯ ಹೆಸರುಗಳನ್ನೇ ಟೈಟಲ್‌ ಆಗಿಟ್ಟುಕೊಂಡು ಸಿನೆಮಾ ಮಾಡುವ ಕೋಸ್ಟಲ್‌ವುಡ್‌ನ‌ಲ್ಲಿ ಇಂತಹ ಪಂಚಿಂಗ್‌ ಟೈಟಲ್‌ ಜನರ ಆಸಕ್ತಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next