Advertisement

ಬೋಳಾರಿಗೆ ಕುದ್ಕನ ಮದಿಮೆ!

03:09 PM Jul 19, 2018 | |

ಜಿ.ಆರ್‌.ಕೆ. ಕಂಬೈನ್‌ ಲಾಂಛನದಡಿಯಲ್ಲಿ ನಿರ್ಮಾಣವಾಗಲಿರುವ ‘ಕುದ್ಕನ ಮದ್ಮೆ’ ತುಳು ಚಿತ್ರಕ್ಕೆ ಇತ್ತೀಚೆಗೆ ಸುರತ್ಕಲ್‌ ಇಡ್ಯಾ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ಕರಾವಳಿ ಭಾಗದಲ್ಲಿ ಬಹಳಷ್ಟು ಫೇಮಸ್‌ ಆದ ‘ಕುದ್ಕನ ಮದ್ಮೆ’ಎಂಬ ಡೈಲಾಗ್‌ ಆಧಾರಿತವಾಗಿ ಈ ಸಿನೆಮಾ ಮೂಡಿಬರಲಿದೆ. ಅಂದಹಾಗೆ, ಇದರಲ್ಲಿ ‘ಕುದ್ಕ’ನ ಪಾತ್ರ ಯಾರು ಮಾಡಲಿದ್ದಾರೆ ಎಂಬ ಪ್ರಶ್ನೆ ಕೋಸ್ಟಲ್‌ವುಡ್‌ನ‌ಲ್ಲಿ ಕೇಳಿಬಂದಿತ್ತು. ಸದ್ಯಕ್ಕೆ ದೊರೆತ ಮಾಹಿತಿ ಪ್ರಕಾರ ಕುದ್ಕನ ರೋಲ್‌ನಲ್ಲಿ ಅರವಿಂದ ಬೋಳಾರ್‌ ಕಾಣಿಸಿಕೊಳ್ಳುವುದು ಬಹುತೇಕ ಫೈನಲ್‌ ಆಗಿದೆ. 

Advertisement

ಮದುವೆಯಾಗಿ ಎರಡು ಮಕ್ಕಳಿರುವವನೊಬ್ಬ ಕೊನೆಯ ಕಾಲದಲ್ಲಿ ಇನ್ನೊಂದು ಮದುವೆಯಾಗಲು ಹೋಗುವ ಕಥೆಯಾಧಾರಿತವಾಗಿ ಕುದ್ಕನ ಮದುವೆ ರೆಡಿಯಾಗಲಿದೆ. ನಾದ ಮೃದಂಗ ಕಿರುಚಿತ್ರಕ್ಕೆ ‘ಪಿರ್ಕಿಬಿತ್ತಿಲ್‌’ ಧಾರಾವಾಹಿ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ರಂಗೋಳು’ ಚಿತ್ರ ನಿರ್ದೇಶಕರಾದ ಎ.ವಿ. ಜಯರಾಜ್‌ ‘ಕುದ್ಕನ ಮದ್ಮೆ ನಿರ್ದೇಶಿಸಲಿದ್ದಾರೆ. ಕನ್ನಡ ಮತ್ತು ತುಳು ಭಾಷೆಯ ಚಲನಚಿತ್ರಗಳಲ್ಲಿ ಛಾಯಾಗ್ರಹಣ ಮಾಡಿರುವ ಮಹಾಬಲೇಶ್ವರ ಹೊಳ್ಳ ಕೆಮ ರಾಮ್ಯಾನ್‌ ಆಗಿದ್ದಾರೆ. ಚಿತ್ರಕತೆ ಸುಧನ್‌ ಶ್ರೀಧರ್‌, ಸಂಕಲನ ಸುಬ್ರಹ್ಮಣ್ಯ ಹೊಳ್ಳ, ಪಿ.ಆರ್‌.ಒ. ಮಹೇಶ್‌ ಮೂರ್ತಿ ಸುರತ್ಕಲ್‌ ಆಗಿದ್ದಾರೆ. ಇನ್ನುಳಿದಂತೆ, ದೇವಿಪ್ರಕಾಶ್‌ ಉರ್ವಸ್ಟೋರ್‌, ಅರುಣ್‌ ಶೆಟ್ಟಿ, ಅಶೋಕ್‌ ಶೆಟ್ಟಿ ಅಂಬ್ಲಿಮೊಗರು, ನವೀನ್‌ ಶೆಟ್ಟಿ ಮುಂತಾದವರು ಅಭಿನಯಿಸಲಿದ್ದು, ಇನ್ನೂ ಹಲವು ಖ್ಯಾತ ಕಲಾವಿದರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next