Advertisement

Kudachi: ಬೆಳಗಾವಿಯಲ್ಲೊಂದು ಹೃದಯ ವಿದ್ರಾವಕ‌ ಘಟನೆ

07:57 PM Sep 29, 2024 | Team Udayavani |

ಕುಡಚಿ: ಕಂದಮ್ಮಗಳ ಜೊತೆಗೆ ತಾಯಿ ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೋಮ್ಮನಾಳ ಗ್ರಾಮದಲ್ಲಿ ರವಿವಾರ (ಸೆ.29) ನಡೆದಿದೆ.

Advertisement

ತಾಯಿ ಯಲ್ಲವ್ವಾ ಕರಿಹೊಳ (30), ಪುತ್ರರಾದ ಸಾತ್ವಿಕ (05), ಮುತ್ತಪ್ಪ (01) ಮೃತದುರ್ದೈವಿಗಳು.

ಬೆಳಗ್ಗೆ 8 ಗಂಟೆಗೆ ತಾಯಿ ಯಲ್ಲವ್ವಾ ಕರಿಹೊಳ ತನ್ನ ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಸಲುವಾಗಿ ತಾಯಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅನುಮಾನಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next