Advertisement

ಕುಚ್‌ ನಹೀ ಸಬ್‌ ಜೂಟಾ ಹೇ

12:45 PM Apr 27, 2019 | Team Udayavani |

ಒಡಿಶಾ ಮತ್ತು ಬಿಹಾರದಲ್ಲಿ ಶುಕ್ರವಾರ ಚುನಾವಣ ರ್ಯಾಲಿ ನಡೆಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಲು ಹೊಸ ಉದ್ಘೋಷ ವೊಂದನ್ನು ಹುಟ್ಟು ಹಾಕಿದ್ದಾರೆ.

Advertisement

“ಕುಚ್‌ ನಹೀ ಸಬ್‌ ಜೂಟಾ ಹೇ; ನರೇಂದ್ರ ಮೋದಿನೇ ಲೂಟಾ ಹೇ’ (ಸುಳ್ಳೇ ಸುಳ್ಳು ಆಶ್ವಾಸನೆ ನೀಡಿದರು; ನರೇಂದ್ರ ಮೋದಿಯೇ ಲೂಟಿ ಮಾಡಿದರು) ಎಂಬ ಸ್ಲೋಗನ್‌ ಅನ್ನು ಅವರು ಪ್ರಚಾರ ರ್ಯಾಲಿಯಲ್ಲಿ ಬಳಸಿದ್ದಾರೆ. ಬಿಹಾರದಲ್ಲಿ ಮಾತನಾಡಿದ ಅವರು, ಅನಿಲ್‌ ಅಂಬಾನಿಯಂಥ ಕಳ್ಳರಿಂದ ಹಣ ವಸೂಲಿ ಮಾಡಿ, ನ್ಯಾಯ್‌ ಯೋಜನೆಗೆ ಬಳಸಿಕೊಳ್ಳುತ್ತೇವೆ. ಮಧ್ಯಮ ವರ್ಗದ ವೇತನದಾರರು ಆತಂಕಪಡುವ ಅಗತ್ಯವಿಲ್ಲ ಎಂದರು.

ಇದೇ ಮೊದಲ ಬಾರಿಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಕೂಡ ರಾಹುಲ್‌ ಜತೆ ವೇದಿಕೆ ಹಂಚಿಕೊಂಡಿದ್ದರು. ಬಾಲಸೋರ್‌ನಲ್ಲಿ ಮಾತನಾಡಿದ ರಾಹುಲ್‌, ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಕೃಷಿ ಬಜೆಟ್‌
ಮಂಡಿಸುತ್ತೇವೆ. ಅದರಲ್ಲಿ ಮನ್ನಾ ಮಾಡಲಾಗುವ ಸಾಲದ ಪ್ರಮಾಣ, ಕನಿಷ್ಠ ಬೆಂಬಲ ಬೆಲೆಯ ಪ್ರಮಾಣ, ಆಹಾರ ಸಂಸ್ಕರಣಾ ಹಾಗೂ ಶೀತಲೀಕರಣ ಘಟಕ ಸ್ಥಾಪಿಸಲಾಗುವ ಸ್ಥಳಗಳು ಸೇರಿದಂತೆ ವಿವಿಧ ಯೋಜನೆಗಳ ವಿವರ ನೀಡಲಾಗುತ್ತದೆ. ಸಾಲ ಮರುಪಾವತಿಸದೇ ಇರುವ ರೈತರನ್ನು
ಜೈಲಿಗೆ ಅಟ್ಟದಂತೆ ಹೊಸ ಕಾನೂನು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next