Advertisement

ಕರ್ನಾಟಕಕ್ಕೆ ನೀರು ಕಬ್ಬಿನ ಬೆಳೆಗೆ: ಟ್ರಿಬ್ಯುನಲ್‌ನಲ್ಲಿ ಗೋವಾ

04:56 PM Jan 16, 2018 | udayavani editorial |

ಪಣಜಿ : ನೆರೆಯ ಕರ್ನಾಟಕದ ಮಹದಾಯಿ ನೀರಿನ ಬೇಡಿಕೆಯು ಕಬ್ಬು ಬೆಳೆಯ ನೀರಾವರಿ ಉದ್ದೇಶಕ್ಕಾಗಿದೆಯೇ ವಿನಾ ಕುಡಿಯುವ ಉದ್ದೇಶಕ್ಕಲ್ಲ ಎಂದು ಗೋವಾ ಸರಕಾರ ಮಹದಾಯಿ ನ್ಯಾಯ ಮಂಡಳಿಯ ಮುಂದೆ ಹೇಳಿದೆ. 

Advertisement

ಕರ್ನಾಟಕ ಮಹದಾಯಿ ನೀರನ್ನು ಕೇಳುತ್ತಿರುವುದು ಕುಡಿಯುವ ಉದ್ದೇಶಕ್ಕಾಗಿ ಅಲ್ಲ; ಬದಲು ಅತ್ಯಧಿಕ ನೀರನ್ನು ಬೇಡುವ ಕಬ್ಬಿನ ಬೆಳಗಾಗಿ; ಆದುದರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಮಹದಾಯಿ ನದೀ ನೀರನ್ನು ತಿರುಗಿಸಲು ಬಿಡಬಾರದು ಎಂದು ಗೋವಾ ಸರಕಾರ ಮಹದಾಯಿ ಜಲ ನ್ಯಾಯ ಮಂಡಳಿಗೆ ಹೇಳಿತು.

ಗೋವಾ ಸರಕಾರವನ್ನು ನ್ಯಾಯ ಮಂಡಳಿಯಲ್ಲಿ ಪ್ರತಿನಿಧಿಸಿದ ಹಿರಿಯ ವಕೀಲ ಆತ್ಮಾರಾಮ್‌ ನಾಡಕರ್ಣಿ ಅವರು ನಿನ್ನೆ ಸೋಮವಾರ 531 ಪುಟಗಳ ನಿವೇದನೆಯನ್ನು ಸಲ್ಲಿಸಿದರು. 

ಮಲಪ್ರಭಾ ಜಲಾಶಯದ ನೀರು ಹುಬ್ಬಳ್ಳಿ – ಧಾರವಾಡ ಅವಳಿ ನಗರಗಳ ಕುಡಿಯುವ ನೀರಿಗೆ ಅಗತ್ಯವಾಗಿರುವುದೆಂಬ ಕರ್ನಾಟಕದ ಹೇಳಿಕೆ ಕೂಡ ಸಂಪೂರ್ಣ ಸುಳ್ಳು ಎಂದು ನಾಡಕರ್ಣಿ ತಮ್ಮ ನಿವೇದನೆಯಲ್ಲಿ ವಾದಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next