Advertisement

KSRTC: ಉಡುಪಿ-ಮಂಗಳೂರು ಪ್ರಯಾಣಿಕರ ಸಂಖ್ಯೆ ವೃದ್ಧಿ; ಬೇಡಿಕೆಗೆ ತಕ್ಕಂತೆ ಬಸ್‌ ಸಂಚಾರ

01:58 AM Sep 09, 2020 | mahesh |

ಮಂಗಳೂರು: ಉಡುಪಿ- ಮಂಗಳೂರು ನಡುವೆ ಪ್ರಯಾಣಿಕರ ಓಡಾಟ ನಿಧಾನವಾಗಿ ಹೆಚ್ಚುತ್ತಿದ್ದು ಬಸ್‌ಗಳಿಗೆ ಬೇಡಿಕೆ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿ ಕೂಡ ಈ ಎರಡು ನಗರಗಳ ನಡುವೆ ಬಸ್‌ಗಳನ್ನು ಓಡಿಸುತ್ತಿದೆ. ಉಡುಪಿ-ಮಂಗಳೂರು ನಡುವಿನ ಪ್ರಮುಖ ಸಂಪರ್ಕ ಕೊಂಡಿಗಳಾಗಿರುವ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳು ಕೂಡ ಕೆಲವು ದಿನಗಳಿಂದ ಬಸ್‌ಗಳ ಟ್ರಿಪ್‌ ಸಂಖ್ಯೆ ಹೆಚ್ಚಿಸಿಕೊಂಡಿವೆ. ಈ ನಡುವೆ
ಮಂಗಳೂರು ವಿಭಾಗದಿಂದ 5 ಎಕ್ಸ್‌ ಪ್ರಸ್‌ ಬಸ್‌ಗಳನ್ನು ತಲಾ 4 ಟ್ರಿಪ್‌ಗ್ಳಲ್ಲಿ ಓಡಿಸಲಾಗುತ್ತಿದೆ. 2 ಟ್ರಿಪ್‌ಗ್ಳಲ್ಲಿ ಸಾಕಷ್ಟು ಪ್ರಯಾಣಿಕರಿರು ತ್ತಾರೆ.

Advertisement

ನಷ್ಟ ತಪ್ಪಿಸಲು ಟ್ರಿಪ್‌ ಕಡಿತ
ಈ ಹಿಂದೆ ಉಡುಪಿ ಮತ್ತು ಮಂಗಳೂರು ನಡುವೆ ಪ್ರತಿ 2 ನಿಮಿಷಕ್ಕೊಂದು ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ಈಗ ಪ್ರಯಾಣಿಕರ ಕೊರತೆಯಿಂದಾಗಿ ಶೇ. 60ರಷ್ಟು ಬಸ್‌ಗಳು ಮಾತ್ರ ಓಡಾಡುತ್ತಿವೆ. ಪ್ರಯಾಣಿಕರು ಹೆಚ್ಚಾಗಿರುವ ಬೆಳಗ್ಗೆ ಮತ್ತು ಸಂಜೆ ವೇಳೆ ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ಟ್ರಿಪ್‌ ಕಡಿತ ಮಾಡಲಾಗುತ್ತಿದೆ. ನಷ್ಟ ತಪ್ಪಿಸಲು ಇದು ಅನಿವಾರ್ಯ ಎನ್ನುತ್ತಾರೆ ಬಸ್‌ ಮಾಲಕರು.

ವೋಲ್ವೋ ಬದಲು ಎಕ್ಸ್‌ಪ್ರೆಸ್‌
ಲಾಕ್‌ಡೌನ್‌ ಮೊದಲು ಮಣಿಪಾಲ-ಸ್ಟೇಟ್‌ಬ್ಯಾಂಕ್‌ ನಡುವೆ ಸಂಚರಿಸುತ್ತಿದ್ದ ವೋಲ್ವೋ ಬಸ್‌ಗಳ ಬದಲಿಗೆ ಎಕ್ಸ್‌ಪ್ರೆಸ್‌ ಬಸ್‌ಗಳನ್ನು (ಸ್ಟೇಟ್‌ಬ್ಯಾಂಕಿನಿಂದ ಉಡುಪಿ ವರೆಗೆ) ಕೆಎಸ್‌ಆರ್‌ಟಿಸಿ ಓಡಿಸುತ್ತಿದೆ ವೋಲ್ವೋಗಳು ಪ್ರತಿ ಅರ್ಧ ಗಂಟೆಗೊಮ್ಮೆ ಓಡಾಡುತ್ತಿದ್ದವು. ಈಗ ಜನಸಂದಣಿ ಕಡಿಮೆ ಇರುವುದರಿಂದ ಬೇಡಿಕೆಗೆ ತಕ್ಕಂತೆ ಬಸ್‌ಗಳನ್ನು ಬಿಡಲಾಗುತ್ತಿದೆ.

ಬೇಡಿಕೆಗೆ ತಕ್ಕಂತೆ ಬಸ್‌ ಓಡಾಟ
ಮಂಗಳೂರು-ಉಡುಪಿ ನಡುವೆ ಈ ಹಿಂದೆ ಇದ್ದ ವೋಲ್ವೋ ಬಸ್‌ಗಳ ಓಡಾಟದ ಪರವಾನಿಗೆ ಆಧಾರದಲ್ಲಿ ಎಕ್ಸ್‌ಪ್ರೆಸ್‌ ಬಸ್‌ಗಳನ್ನು ಓಡಿಸಲಾಗುತ್ತಿದೆ. ಪ್ರಯಾಣಿಕರ ಕೊರತೆ ಇರುವುದರಿಂದ ನಿರ್ದಿಷ್ಟ ಸಮಯದಲ್ಲಿ ಓಡಿಸುತ್ತಿಲ್ಲ. ಬೇಡಿಕೆ ಬಂದರೆ ಇನ್ನಷ್ಟು ಬಸ್‌ಗಳನ್ನು ಓಡಿಸಲು ಸಿದ್ಧರಿದ್ದೇವೆ. – ಅರುಣ್‌ ಕುಮಾರ್‌,
ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ ಮಂಗಳೂರು ಘಟಕ

Advertisement

Udayavani is now on Telegram. Click here to join our channel and stay updated with the latest news.

Next