Advertisement

ಕಾಲ್ತೋಡು-ಹೇರಂಜಾಲುವಿಗೆ ದೊಡ್ಡ ಬಸ್‌

09:26 PM Jun 28, 2019 | Sriram |

ಉಪ್ಪುಂದ: ಕಾಲ್ತೋಡು, ಬೊಳ್ಳಂಬಳಿ, ಹೆರಂಜಾಲುವಿನಿಂದ ಖಂಬದಕೋಣೆ ಮಾರ್ಗವಾಗಿ ಕುಂದಾಪುರಕ್ಕೆ ತೆರಳುವ ಮಿನಿ ಬಸ್‌ ಬದಲಾಗಿ ದೊಡ್ಡ ಬಸ್‌ ಬಿಡುವ ಮೂಲಕ ಇಲ್ಲಿನ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗೆ ಇಲಾಖೆ ಸ್ಪಂದಿಸಿದೆ.

Advertisement

ಬೊಳ್ಳಂಬಳ್ಳಿಯಿಂದ ಬರುವ ಬಸ್‌ ಕಾಲ್ತೋಡು, ಹೆರಂಜಾಲು ಮೂಲಕ ಬಂದು ಖಂಬಕೋಣೆಯಿಂದ ಸಂಚರಿಸುವ ಬಸ್‌ನಲ್ಲಿ ನಿತ್ಯ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳಿಂದ ತುಂಬಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತಿತ್ತು.

ಉದಯವಾಣಿ ವರದಿ
ವಿದ್ಯಾರ್ಥಿಗಳು ಬಸ್‌ನಲ್ಲಿ ನೇತಾಡಿಕೊಂಡೇ ತೆರಳುವ ಪರಿಸ್ಥಿತಿಯ ಕುರಿತು ಕುರಿತು ಉದಯವಾಣಿಯು ಜೂ. 28ರಂದು ಜನಪರ ಕಾಳಜಿಯಲ್ಲಿ ವರದಿ ಪ್ರಕಟಿಸುವ ಮೂಲಕ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಇಲಾಖೆಗಳ ಅಧಿಕಾರಿಗಳ ಗಮನ ಸೆಳೆದಿತ್ತು. ವರದಿಗೆ ಸ್ಪಂದಿರುವ ಸಾರಿಗೆ ಇಲಾಖೆಯು ಈ ಭಾಗಕ್ಕೆ ದೊಡ್ಡ ಬಸ್‌ ಸಂಚರಿಸುವಂತೆ ಮಾಡಿದೆ.

ಸರಕಾರದಿಂದ ದೊಡ್ಡ ಬಸ್‌ ಸಂಚರಿಸುವಂತೆ ಮಾಡಿರುವುದಿಂದ ಈ ಭಾಗ ಪ್ರತಿದಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಗೂ ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next