Advertisement

ಕೆಎಸ್‌ಆರ್‌ಟಿಸಿ: ವೇತನ ಕಡಿತ ಇಲ್ಲ

10:11 AM Apr 05, 2020 | Sriram |

ಚಿತ್ರದುರ್ಗ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಯಾವುದೇ ಬಸ್‌ ಓಡಾಡುತ್ತಿಲ್ಲ. ಆದರೂ ಕೆಎಸ್‌ಆರ್‌ಟಿಸಿ ನೌಕರರ ರಜೆ ಕಡಿತ ಮಾಡುವುದಿಲ್ಲ. ಮಾರ್ಚ್‌ ತಿಂಗಳ ಪೂರ್ತಿ ವೇತನ ನೀಡಲಿದ್ದೇವೆ. ಆದರೆ ಕೋವಿಡ್ 19 ಸಂಕಷ್ಟದ ನೆರವಿಗಾಗಿ ನೌಕರರ ಒಂದು ದಿನದ ವೇತನ ಕಡಿತ ಮಾಡಿ ಸಿಎಂ ಮೂಲಕ ಪ್ರಧಾನಮಂತ್ರಿ ಪರಿಹಾರ ನಿಧಿ ಗೆ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್‌ ತಿಳಿಸಿದರು.

Advertisement

ಪತ್ರಕರ್ತರೊಂದಿಗೆ ಮಾತ ನಾಡಿ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ತಿಂಗಳು ಬಸ್‌ಗಳು ಓಡಾಡುತ್ತಿಲ್ಲ. ಟಿಕೆಟ್‌ ಕಲೆಕ್ಷನ್‌ನಿಂದ ಬರುತ್ತಿದ್ದ ಆದಾಯವೂ ಇಲ್ಲ. ಆದರೆ ಜೀವನ್ಮರಣದ ಪ್ರಶ್ನೆ ಬಂದಾಗ ಲಾಭ- ನಷ್ಟದ ಲೆಕ್ಕ ಹಾಕಬಾರದು. ಕೆಎಸ್‌ಆರ್‌ಟಿಸಿ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವ ವಿಚಾರ ಸರಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು. ಮುಂದಿನ ತಿಂಗಳು ಇದು ಚರ್ಚೆಗೆ ಬರುವ ನಿರೀಕ್ಷೆಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next