Advertisement

ಉಡುಪಿ, ದ.ಕ. ಜಿಲ್ಲೆಯಿಂದ ರಾತ್ರಿ ಬಸ್‌ ಸಂಚಾರ ಆರಂಭ

11:11 AM Jun 03, 2020 | sudhir |

ಉಡುಪಿ/ಮಂಗಳೂರು: ಉಡುಪಿ, ದ.ಕ. ಜಿಲ್ಲೆಯಿಂದ ದೂರದ ಊರುಗಳಿಗೆ ಸೀಮಿತವಾಗಿ ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್‌ಗಳ ರಾತ್ರಿ ಸಂಚಾರ ಆರಂಭವಾಗಿದೆ.

Advertisement

ಕೆಎಸ್ಸಾರ್ಟಿಸಿ ಉಡುಪಿ, ಮಂಗಳೂರು, ಪುತ್ತೂರು ವಿಭಾಗದಿಂದ ರಾತ್ರಿ 9ರ ವರೆಗೆ ಬಸ್‌ ಸಂಚಾರ ನಡೆಸಲಿದೆ. ಸದ್ಯ ಬೆಂಗಳೂರಿಗೆ ಮಾತ್ರ ಕೊನೆಯ ಬಸ್‌ ರಾತ್ರಿ 9ಕ್ಕೆ ಸಂಚರಿಸಲಿದೆ.

ಉಡುಪಿ, ಮಂಗಳೂರು ವಿಭಾಗದಿಂದ ಬಾಗಲಕೋಟೆ, ಹುಬ್ಬಳ್ಳಿ, ಬಳ್ಳಾರಿ, ರಾಯ ಚೂರು, ಬೆಳಗಾವಿ ಸಹಿತ ದೂರದ ಊರಿಗೆ ರಾತ್ರಿ 8ರ ವರೆಗೂ ಬಸ್‌ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಸಹಿತ ದೂರದ ಊರಿಗೆ ತೆರಳುವ ಖಾಸಗಿ ಬಸ್‌ ಸಂಚಾರವೂ ಆರಂಭಗೊಂಡಿದೆ. ಸ್ಲೀಪರ್‌ ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next