Advertisement
2017ರ ಮಾರ್ಚ್ ಅಂತ್ಯಕ್ಕೆ ಕೆಎಸ್ಆರ್ಟಿಸಿ ಆರು ಘಟಕಗಳನ್ನು ಒಳಗೊಂಡ ಕೇಂದ್ರೀಯ ವಿಭಾಗದ ಲಾಭ 75 ಲಕ್ಷ ರೂ. ಇತ್ತು. ಆದರೆ, ಕೇವಲ ಒಂಬತ್ತು ತಿಂಗಳಲ್ಲಿ ಇದು 14 ಕೋಟಿ ರೂ. ಆಗಿದ್ದು, ತಿಂಗಳಿಗೆ ಸರಾಸರಿ 1.5ರಿಂದ 2 ಕೋಟಿ ರೂ.ಲಾಭ ಹರಿದುಬಂದಿದೆ. ವರ್ಷಾಂತ್ಯಕ್ಕೆ ಇನ್ನೂ ಹತ್ತು ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಆದಾಯ ಹೆಚ್ಚಳಕ್ಕೂ ಒಂದು ಪ್ರಮುಖ ಕಾರಣ ಇದೆ. ಕೆಲವು ಪೂರಕ ಅಂಶಗಳನ್ನು ಕೈಗೊಂಡಿದ್ದ ಪರಿಣಾಮ ಏಕಾಏಕಿ ಲಾಭದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಅದರಲ್ಲೂ ಮುಖ್ಯವಾಗಿ “ಪೀಕ್ ಸೀಜನ್’ನಲ್ಲಿ ನಿರಂತರ 26 ದಿನಗಳು ಕಾರ್ಯನಿರ್ವಹಿಸುವ ಚಾಲಕ ಮತ್ತು ಚಾಲಕ ಕಮ್ ನಿರ್ವಾಹಕರ “ಉತ್ತಮ ಸೇವೆ’ಗೆ ಪುರಸ್ಕಾರ ಘೋಷಣೆ ಮಾಡಲಾಗಿತ್ತು. ಇದು ಫಲ ನೀಡಿತು ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಹೇಳುತ್ತಾರೆ.
Related Articles
Advertisement
ಕಳೆದ ವರ್ಷ ಸರಣಿ ಬಂದ್:ಕೇಂದ್ರೀಯ ವಿಭಾಗವು ಪ್ರತಿ ವರ್ಷ ಸರಾಸರಿ 10ರಿಂದ 12 ಕೋಟಿ ಲಾಭ ಗಳಿಸುತ್ತದೆ. 2015-16ರಲ್ಲಿ 34.18 ಕೋಟಿ ಲಾಭ ಗಳಿಸಿತ್ತು. ಆದರೆ, ಕಳೆದ ವರ್ಷ ಲಾಭದ ಪ್ರಮಾಣ ಪಾತಾಳಕ್ಕೆ ಕುಸಿದಿತ್ತು. ತಮಿಳುನಾಡಿನಲ್ಲಿ ಬಂದ್, ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ಬಂದ್, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿಗಮದ ಸಿಬ್ಬಂದಿಯಿಂದ ಮೂರು ದಿನ ಬಂದ್, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಜಯಲಲಿತಾ ಸಾವು ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣ ಎಂದು ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ. ಸಾರಿಗೆ ಆದಾಯವು ಕಳೆದ ವರ್ಷ 262.56 ಕೋಟಿ ರೂ. ಇತ್ತು. ಈ ವರ್ಷ ಇದು 285.41 ಕೋಟಿ ರೂ. ಆಗಿದೆ. ಅದೇ ರೀತಿ, ಇಪಿಕೆಎಂ ಕಳೆದ ವರ್ಷ 37.28 ಇದ್ದದ್ದು, 38.68 ಆಗಿದೆ. ಹಬ್ಬ-ಹರಿದಿನಗಳಲ್ಲಿ ಕಾರ್ಯಾಚರಣೆ ಮಾಡಿದ ಹೆಚ್ಚುವರಿ ಬಸ್ಗಳು 34.14 ಲಕ್ಷ ಕಿ.ಮೀ. ಕಾರ್ಯಾಚರಣೆ ಮಾಡಿವೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರೀಯ ವಿಭಾಗದಲ್ಲಿ ಲಾಭ ಗಳಿಕೆ ಹೀಗಿದೆ.
ವರ್ಷ ಲಾಭ (ಕೋಟಿ ರೂ.ಗಳಲ್ಲಿ)
2013-14 9.39
2014-15 11.01
2015-16 34.18
2016-17 75 ಲಕ್ಷ
2017-18 14.15 (ಡಿಸೆಂಬರ್ವರೆಗೆ) – ವಿಜಯಕುಮಾರ್ ಚಂದರಗಿ