Advertisement

ಕೆಎಸ್‌ಆರ್‌ಟಿಸಿ ಉಚಿತ ಸೇವೆ

01:03 AM Aug 09, 2019 | Sriram |

ಬೆಂಗಳೂರು: ನೆರೆ ಸಂತ್ರಸ್ತರ ನೆರವಿಗೆ ಧಾವಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಪರಿಹಾರ ಸಾಮಗ್ರಿಗಳನ್ನು ಯಾವುದೇ ಶುಲ್ಕವಿಲ್ಲದೆ ಸಾಗಿಸಲು ಮುಂದಾಗಿದೆ.

Advertisement

ನಿಗಮದ ದೈನಂದಿನ ಸಾರಿಗೆಗಳಲ್ಲಿ ಸಾಗಿಸಲು ಆಯಾ ಬಸ್‌ ನಿಲ್ದಾಣಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ. ಅದರಂತೆ ಜಿಲ್ಲಾಡಳಿತದ ಸೂಚನೆ ಮೇರೆಗೆ ಅಗತ್ಯಕ್ಕೆ ಅನುಗುಣವಾಗಿ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಅಧಿಕಾರಿಗಳು ಆದ್ಯತೆಯಾಗಿ ಬಸ್‌ ವ್ಯವಸ್ಥೆ ಕಲ್ಪಿಸಬೇಕು. ಈ ಸಂಬಂಧ ಸ್ವತಃ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಆದೇಶ ಹೊರಡಿಸಿದ್ದು, ಮಂಗಳೂರು-1 ಮತ್ತು 3, ಉಡುಪಿ, ಕುಂದಾಪುರ, ಪುತ್ತೂರು, ಬಿ.ಸಿ. ರೋಡ್‌, ಧರ್ಮಸ್ಥಳ, ಸುಳ್ಯ, ಮಡಿಕೇರಿ, ಚಿಕ್ಕಮಗಳೂರು, ಸಕಲೇಶಪುರ, ಮೂಡಿಗೆರೆ, ಹಾಸನ-1,ರಾಮನಾಥಪುರ, ಹುಣಸೂರು, ಪಿರಿಯಾಪಟ್ಟಣ,ನಂಜನಗೂಡು, ಗುಂಡ್ಲುಪೇಟೆ, ಶಿವಮೊಗ್ಗ, ಹೊನ್ನಾಳಿ,
ಸಾಗರ ಘಟಕಗಳಲ್ಲಿ ಬಸ್‌ ಸೇವೆಯ ಅವಶ್ಯಕತೆ ಬಿದ್ದಾಗ,ತಕ್ಷಣ ಸ್ಥಳಕ್ಕೆ ಬಸ್‌ ಕಳುಹಿಸುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next