Advertisement

70 ಕಿ.ಮೀ ಶವವನ್ನು ಎಳೆದೊಯ್ದ KSRTC ಚಾಲಕ 

08:20 AM Feb 05, 2018 | Team Udayavani |

ಬೆಂಗಳೂರು: ಶಾಂತಿನಗರದ ಕೆಎಸ್ಆರ್ ಟಿಸಿ ಬಸ್ ಡಿಪ್ಪೋದಲ್ಲಿ ಶವ ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದ್ದು, ಕೆಎಸ್ಆರ್ ಟಿಸಿ  ಬಸ್ ಚಾಲಕ  ವ್ಯಕ್ತಿಯ ದೇಹವನ್ನು ಚನ್ನಪಟ್ಟಣದಿಂದ ಬೆಂಗಳೂರಿನವರೆಗೆ ಬರೋಬ್ಬರಿ 70 ಕಿ.ಮೀ ದೂರದವರೆಗೆ ಬಸ್ಸಿನಡಿ ಎಳೆದುಕೊಂಡು ತಂದಿರುವ ಆಘಾತಕಾರಿ ವಿಚಾರ ಬೆಳಕಿಗೆಬಂದಿದೆ.

Advertisement

ಘಟನೆಯ ವಿವರ: ಶಾಂತಿನಗರ ಡಿಪ್ಪೋವೊಂದರಲ್ಲಿ ಭಾನುವಾರ ವ್ಯಕ್ತಿಯ ಶವ ಪತ್ತೆಯಾಗಿದ್ದು ಈ ವಿಚಾರವಾಗಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಪೊಲೀಸರು ಸಿಸಿ ಕ್ಯಾಮೆರಾ ಮೂಲಕ ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು ಆರೋಪಿ ಬಸ್ ಚಾಲಕ ಮೊಯಿನುದ್ದೀನ್ ಎಂದು ತಿಳಿದುಬಂದಿದೆ, ವಿಚಾರಣೆ ನಡೆಸಿದಾಗ ಚಾಲಕ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದು ಚನ್ನಪಟ್ಟಣದಲ್ಲಿ ವ್ಯಕ್ತಿಗೆ ಬಸ್ ಡಿಕ್ಕಿ ಹೊಡೆದಿತ್ತು ವ್ಯಕ್ತಿ ಬುಸ್ಸಿನಡಿಗೆ ಸಿಲುಕಿಕೊಂಡಿದ್ದು  ದೇಹವನ್ನು ಎಳೆದು ತಂದಿರುವ ಮಾಹಿತಿಯನ್ನು ಚಾಲಕ ಬಹಿರಂಗಪಡಿಸಿದ್ದಾನೆ. 
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next