Advertisement

ಸಹಕಾರ ಸಾರಿಗೆ ಮಾರ್ಗದಲ್ಲಿ ಓಡಲಿವೆ ಕೆಎಸ್‌ಆರ್‌ಟಿಸಿ ಬಸ್‌

11:15 AM Feb 19, 2020 | sudhir |

ಬೆಂಗಳೂರು: ಸಹಕಾರ ಸಾರಿಗೆ ಬಸ್‌ ಸೇವೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗದಿರಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಬಸ್‌ ಸೇವೆ ಕಲ್ಪಿಸಿದೆ.

Advertisement

ಕೊಪ್ಪದಿಂದ ಶಿವಮೊಗ್ಗ, ತೀರ್ಥಹಳ್ಳಿ, ಮೇಲ್ವಾರ್‌, ಬಾಳೇಹೊನ್ನೂರು, ಮೂಡಬೂರು, ಮಲ್ಲಂದೂರು, ಕಟ್ಟಿನಮನೆ, ಶೃಂಗೇರಿ-ಕೊಪ್ಪ-ಶಿವಮೊಗ್ಗ, ಉಡುಪಿ-ಶೃಂಗೇರಿ-ಕೊಪ್ಪ, ಉಡುಪಿ-ಕೊಪ್ಪ-ಬೀರೂರು ಮಾರ್ಗಗಳಲ್ಲಿ 16 ಬಸ್‌ಗಳು 56 ಟ್ರಿಪ್‌ ಕಾರ್ಯಾಚರಣೆ ಮಾಡಲಿವೆ. ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಕಲ್ಪಿಸಲು ನಿಗಮ ಸಿದ್ಧವಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next