Advertisement

ಮೆಜೆಸ್ಟಿಕ್‌:ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬಾಲಕ ಬಲಿ 

04:27 PM Nov 25, 2017 | |

ಬೆಂಗಳೂರು: ಟ್ರಾಫಿಕ್‌ ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾದಾಗ ಬೈಕ್‌ನಲ್ಲಿ ತಾತನೊಂದಿಗೆ ಸಹಸವಾರನಾಗಿದ್ದ 5 ನೇ ತರಗತಿ ಬಾಲಕನೊಬ್ಬ  ಕೆಎಸ್‌ಆರ್‌ಟಿಸಿ ಬಸ್‌ ಅಡಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.ವಿದ್ಯಾವರ್ಧಕ ಶಾಲೆಯ 5 ನೇ ತರಗತಿ ವಿದ್ಯಾರ್ಥಿ ದರ್ಶನ್‌ ಮೃತ ದುರ್ದೈವಿ. 

Advertisement

ಅಜ್ಜ ರಾಜಣ್ಣ ಮೃತ ದರ್ಶನ್‌ ಮತ್ತು ಆಕೆಯ ಸಹೋದರಿಯನ್ನುಸ್ಕೂಟರ್‌ನಲ್ಲಿ ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಟ್ರಾಫಿಕ್‌ ಪೊಲೀಸರು ತಪಾಸಣೆ ನಡೆಸುತ್ತಿದ್ದರು ಎನ್ನಲಾಗಿದೆ.

ಮೊಮ್ಮಕ್ಕಳಿಬ್ಬರು ಹೆಲ್ಮೆಟ್‌ ಧರಿಸಿರಲಿಲ್ಲ. ಈ ವೇಳೆ ಪೊಲೀಸರಿಂದತಪ್ಪಿಸಿಕೊಳ್ಳಲು ವೇಗವಾಗಿ ಸ್ಕೂಟರ್‌ ಚಲಾಯಿಸಿದ್ದಾರೆ ಎನ್ನಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ಎದುರೆ ಸ್ಕಿಡ್‌ ಆಗಿ ಬಿದ್ದಿದ್ದು, ದರ್ಶನ್‌ ತಲೆಯ ಮಮೇಲೆ ಬಸ್‌ ಹರಿದು ಭೀಕರ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಪೊಲೀಸರು ಬಸ್‌ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next