Advertisement

ಮಧ್ಯರಾತ್ರಿ ಕೆಎಸ್ಆರ್‌ಟಿಸಿ ಬಸ್ ಪಲ್ಟಿ: ತಪ್ಪಿದ ಭಾರಿ ಅನಾಹುತ

09:32 AM Sep 21, 2019 | keerthan |

ಕೊಪ್ಪಳ: ಗಂಗಾವತಿ ಸಿದ್ದಾಪುರ ಸಮೀಪದ ರವಿನಗರದ ಬಳಿ ಕೆಎಸ್ಆರ್‌ಟಿಸಿ ಬಸ್ ಪಲ್ಟಿಯಾಗಿದ್ದು, ಭಾರಿ ಅನಾಹುತವೊಂದು ತಪ್ಪಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

Advertisement

ಬಸ್ ನಲ್ಲಿ 12ಕ್ಕೂ ಅಧಿಕ ಜನ ಇದ್ದರು ಎನ್ನಲಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್. ಪೇಟೆ ಡಿಪೊಗೆ ಸೇರಿದ ಬಸ್ ಇದಾಗಿದ್ದು, ನಿನ್ನೆ ರಾತ್ರಿ ರಾಯಚೂರಿಗೆ ಪೊಲೀಸರನ್ನು ತಲುಪಿಸಿ ಮಾಡಿ ಡಿಪೊಗೆ ಮರಳುವಾಗ ಸಂಭವಿಸಿದ ಘಟನೆ ನಡೆದಿದೆ.

ಡಿಪೊ ಅಧಿಕಾರಿಗಳು ರಾತ್ರೋರಾತ್ರಿ ವಾಪಾಸಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವಾಪಸು ಬರುತ್ತಿದ್ದರು. ಖಾಲಿ ಬರುವ ಬದಲು ಪ್ರಯಾಣಿಕರನ್ನು ತುಂಬಿಕೊಂಡು ಬರಲು ಅಧಿಕಾರಿಗಳ ಸೂಚನೆ ನೀಡಿದ್ದರು ಎನ್ನಲಾಗಿದೆ. ಚಾಲಕ-ನಿರ್ವಾಹಕರಿಗೆ ವಿಶ್ರಾಂತಿ ಇಲ್ಲದೇ ಕರ್ತವ್ಯ ನಿಯೋಜನೆ ಮಾಡಿದ್ದರಿಂದ ಈ ಅನಾಹುತವಾಗಿದೆ ಎಂದು ಆರೋಪಗಳು ಕೇಳಿ ಬಂದಿವೆ.

ಗಾಯಾಳುಗಳನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next