Advertisement

ಐನೆಕಿದು: ರಸ್ತೆಯಲ್ಲಿ ಹೂತು ಹೋದ ಕೆಎಸ್‌ಆರ್‌ಟಿಸಿ ಬಸ್‌

05:40 PM Jul 15, 2022 | Team Udayavani |

ಸುಬ್ರಹ್ಮಣ್ಯ: ಸರಕಾರಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಹದಗೆಟ್ಟ ರಸ್ತೆಯೊಂದರಲ್ಲಿ ಕೆಸರಲ್ಲಿ ಹೂತು ಹೋಗಿ ಸಂಕಷ್ಟ ಅನುಭವಿಸಿದ ಘಟನೆ ಕಡಬ ತಾಲೂಕಿನ ಐನೆಕಿದು ಎಂಬಲ್ಲಿ ನಡೆದಿದೆ.

Advertisement

ಐನೆಕಿದು-ಕೋಟೆ ಸಂಪರ್ಕ ರಸ್ತೆಯ ಕೋಟೆಯಡ್ಕ ಎಂಬಲ್ಲಿ ಘಟನೆ ನಡೆದಿದೆ. ಸಂಜೆ ತೆರಳುವ ಬಸ್‌ ರಸ್ತೆಯ ಕೆಸರಲ್ಲಿ ಹೂತು ಬಾಕಿಯಾಗಿದೆ. ಬಳಿಕ ಬಸ್ಸಲ್ಲಿದ್ದವರು ಇಳಿದು ತೆರಳಿದ್ದಾರೆ.

ಬಸ್‌ನ್ನು ಮೇಲಕ್ಕೆತ್ತಿ ತೆರವು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದೇ ರಸ್ತೆಯಲ್ಲಿ ಕಳೆದ ವರ್ಷವೂ ಸರಕಾರಿ ಬಸ್‌ ಬಾಕಿಯಾಗಿ ಸಂಕಷ್ಟ ಅನುಭವಿಸಿತ್ತು ಎನ್ನಲಾಗಿದೆ.

ಇದನ್ನೂ ಓದಿ:ಚೆನ್ನೈ: ಹಿರಿಯ ನಟ ಪ್ರತಾಪ್ ಪೋತೆನ್ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆ!

ತೀರ ಹದಗೆಟ್ಟ ರಸ್ತೆಯಿಂದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next