Advertisement

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

12:41 AM Apr 28, 2024 | Team Udayavani |

ಪುತ್ತೂರು: ಕೆಎಸ್ಸಾರ್ಟಿಸಿ ಬಸ್‌ ಮತ್ತು ಆಟೋರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ರಿûಾ ಚಾಲಕ ಮೃತಪಟ್ಟ ಘಟನೆ ಶನಿವಾರ ನಸುಕಿನ ಜಾವ ಪುತ್ತೂರಿನ ಮುಕ್ರಂಪಾಡಿ ಬಳಿ ಸಂಭವಿಸಿದೆ.

Advertisement

ಜೈಸನ್‌ (30) ಮೃತ ಆಟೋರಿಕ್ಷಾ ಚಾಲಕ. ಲೋಕಸಭಾ ಚುನಾವಣೆ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಬರುತ್ತಿದ್ದ ಬಸ್‌ ಇದಾಗಿದ್ದು ಶನಿವಾರ ನಸುಕಿನ ಜಾವ 2 ಗಂಟೆ ವೇಳೆ ಅಪಘಾತ ಸಂಭವಿಸಿದೆ. ಮುಖಾಮುಖಿ ನಡೆದ ಅಪಘಾತದಲ್ಲಿ ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಘಟನೆಯಲ್ಲಿ ಆಟೋರಿಕ್ಷಾದಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಪುತ್ತೂರು ಅಗ್ನಿಶಾಮಕ ದಳದವರು ಹೊರತೆಗೆದಿದ್ದು, ಗಂಭೀರ ಗಾಯಗೊಂಡಿದ್ದ ಅಟೋ ಚಾಲಕ ಜೈಸನ್‌ ಸ್ಥಳದಲ್ಲೇ ಮತಪಟ್ಟರು ಎಂದು ತಿಳಿದು ಬಂದಿದೆ.

ಮತದಾನ ಮಾಡಿದ್ದ ವೃದ್ಧೆ ಸಾವು
ಪುತ್ತೂರು: ಬೊಳುವಾರು ನಿವಾಸಿ ಸುಬ್ರಹ್ಮಣ್ಯ ಭಟ್‌ ಅವರ ಪತ್ನಿ ದೇವಕಿ ಸುಬ್ರಹ್ಮಣ್ಯ ಭಟ್‌ (81) ಅವರು ಎ. 26 ರಂದು ರಾತ್ರಿ ನಿಧನ ಹೊಂದಿದರು. ಮೃತರು ಪತಿ, 6 ಮಂದಿ ಪುತ್ರಿಯರನ್ನು ಅಗಲಿದ್ದಾರೆ.

ಎ. 26ರ ಬೆಳಗ್ಗೆ ಬೊಳುವಾರು ಶಾಲಾ ಮತಗಟ್ಟೆಗೆ (123) ಬಿಎಲ್‌ಒ ಯಶೋಧಾ ಅವರ ಸಹಾಯದಿಂದ ವ್ಹೀಲ್‌ಚೇರ್‌ ಮೂಲಕ ದೇವಕಿ ಅವರು ಆಗಮಿಸಿ, ಮತ ಚಲಾವಣೆ ಮಾಡಿದ್ದರು. ರಾತ್ರಿ ಮನೆಯಲ್ಲೇ ವಯೋಸಹಜ ಕಾರಣದಿಂದ ನಿಧನ ಹೊಂದಿದರು.

Advertisement

Udayavani is now on Telegram. Click here to join our channel and stay updated with the latest news.

Next