Advertisement

ಗ್ರಾ.ಪಂ. ಮಟ್ಟದಲ್ಲಿ ಕಾರ್ಯಪಡೆ; ಪರಿಣಾಮಕಾರಿ ಸೇವೆ : ಕೆ.ಎಸ್‌.ಈಶ್ವರಪ್ಪ

03:27 AM May 25, 2021 | Team Udayavani |

ಬೆಂಗಳೂರು: ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರಕಾರದ ಕರ್ತವ್ಯದ ಜತೆ ಸಮಾಜದ ಜವಾಬ್ದಾರಿಯೂ ಇದೆ. ಸರಕಾರದ ಮಂತ್ರಿಯಾಗಿ ಏನು ಮಾಡಿದ್ದೇನೆ ಎಂಬುದಕ್ಕಿಂತ ಸಮಾಜದ ವ್ಯಕ್ತಿಯಾಗಿ ಎಲ್ಲರನ್ನೂ ಜತೆಗೆ ತೆಗೆದುಕೊಂಡು ಕೆಲಸ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ. ಇದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೆ.ಎಸ್‌.ಈಶ್ವರಪ್ಪ ಅವರು ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಉದಯವಾಣಿ ಬಳಿ ಹಂಚಿಕೊಂಡಿದ್ದು ಹೀಗೆ.

Advertisement

– ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣ ಹೇಗಿದೆ ?
ಗ್ರಾ. ಪಂ. ಮಟ್ಟ ಮತ್ತು ಗ್ರಾಮ ಮಟ್ಟದ ಕಾರ್ಯಪಡೆ ರಚಿಸಲಾಗಿದ್ದು, ಕಾರ್ಯ ಪಡೆಯ ಸದಸ್ಯರಿಗೆ, ಸ್ವಯಂ ಸೇವಕರಿಗೆ ತರಬೇತಿ ನೀಡ ಲಾಗಿದೆ. ಕಾರ್ಯಪಡೆಗಳು ನಗರದಿಂದ ಹಳ್ಳಿಗ ಳಿಗೆ ಮರಳಿ ಬಂದ ವಲಸಿಗರ ಕುಟುಂಬಗಳಿಗೆ ವೈದ್ಯಕೀಯ ಸೇವೆ ಸೇರಿ ಸಾಮಾಜಿಕ ಭದ್ರತೆ ಸೇವೆ ಗಳನ್ನು ಪರಿಣಾಮಕಾರಿಯಾಗಿ ನೀಡುತ್ತಿವೆ.

– ಗ್ರಾಮೀಣ ಭಾಗದ ಜನರ ಆರ್ಥಿಕ ಸಂಕಷ್ಟ ನಿವಾರಿಸಲು ಕೈಗೊಂಡಿರುವ ಕ್ರಮಗಳೇನು?
ನರೇಗಾ ಅಡಿ ನಾವು ಉದ್ಯೋಗ ನೀಡುವ ಕೆಲಸ ಮಾಡಿದ್ದೇವೆ. ಕಳೆದ ವರ್ಷ ನಮಗೆ 13 ಕೋಟಿ ಮಾನವ ದಿನ ಸೃಜನೆಗೆ ಅವಕಾಶ ಇತ್ತು, 15 ಕೋಟಿ ಮಾನವ ದಿನ ಸೃಜನೆ ಮಾಡಿ ಹೆಚ್ಚುವರಿಯಾಗಿ ಅಗತ್ಯ ಇದ್ದವರಿಗೆ ಕೆಲಸ ನೀಡಿದ್ದೆವು. ಈ ವರ್ಷ ಕೊರೊನಾ ಎರಡನೇ ಅಲೆ ಗ್ರಾಮೀಣ ಭಾಗಕ್ಕೂ ವಿಸ್ತರಣೆಯಾಗಿರುವುದರಿಂದ 40 ಜನರಿಗೆ ಸೀಮಿತವಾಗಿ ಕಾಮಗಾರಿ ಕೈಗೊಳ್ಳಲು ಹಾಗೂ ಎಲ್ಲ ರೀತಿಯ ಎಚ್ಚರಿಕೆ ವಹಿಸಲು ಮಾರ್ಗಸೂಚಿ ನೀಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕೂಲಿಯ ಮೊತ್ತ 299 ರೂ.ಗೆ ಏರಿಸಲಾಗಿದೆ. ರಾಜ್ಯ ಸರಕಾರವು ಪಡಿತರದಾರರಿಗೆ ನೀಡುವ ಆಹಾರ ಧಾನ್ಯದ ಜತೆಗೆ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ.

– ಶಿವಮೊಗ್ಗದಲ್ಲಿ ಕೊರೊನಾ ನಿಯಂತ್ರಣ ಹೇಗಿದೆ?
ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ನಿರಂತರ ಸಭೆ ನಡೆಸಿ ಪ್ರಕರಣಗಳ ನಿಯಂತ್ರ ಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಮೆಗ್ಗಾನ್‌ ಆಸ್ಪತ್ರೆ ಯಲ್ಲಿ ಕೋವಿಡ್‌, ಕೋವಿಡ್‌ಯೇತರ ರೋಗಿಗಳಿಗೆ ಚಿಕಿತ್ಸೆ, ಇರುವ ವ್ಯವಸ್ಥೆ ಹಾಗೂ ಕೊರತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ತತ್‌ಕ್ಷಣಕ್ಕೆ ಆಗಬೇಕಾದ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಪಾಸಿಟಿವ್‌ ಬಂದ ವ್ಯಕ್ತಿಗಳಿಗೆ ತತ್‌ಕ್ಷಣ ಹೋಂ ಐಸೊಲೇಶನ್‌ ಜಾರಿಗೊಳಿಸಿ ಅವರಿಗೆ ಮೆಡಿಕಲ್‌ ಕಿಟ್‌ ಒದಗಿಸ ಬೇಕೆಂಬ ಸೂಚನೆ ನೀಡ ಲಾಗಿದೆ. ಅಗತ್ಯ ಇರುವ ಕಡೆ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪನೆಗೆ ತೀರ್ಮಾನಿಸಲಾಗಿದೆ.

– ಕೊರೊನಾ ನಿಯಂತ್ರಣ ವಿಚಾರವಾಗಿ ಎಷ್ಟು ಸಭೆಗಳನ್ನು ಮಾಡಲಾಗಿದೆ?
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಸಚಿವರಾದ ನರೇಂದ್ರಸಿಂಗ್‌ ತೋಮರ್‌ ಅವರ ಸೂಚನೆಯಂತೆ ಎಲ್ಲ ಜಿಲ್ಲಾ, ತಾಲೂಕು, ಗ್ರಾ. ಪಂ. ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ವೀಡಿಯೋ ಸಂವಾದ ನಡೆಸಿ ಸೂಕ್ತ ಮಾರ್ಗದರ್ಶನ ಸಹ ನೀಡಲಾಯಿತು. ಅಅನಂತರ ಪ್ರತಿ ವಾರ ಕೊರೊನಾ ಕಾರ್ಯಪಡೆಗಳ ಕಾರ್ಯವೈಖರಿ ಮತ್ತು ಫಲಿತಾಂಶದ ಬಗ್ಗೆ ವರದಿ ಪಡೆಯಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next