Advertisement

ಸಿದ್ದರಾಮಯ್ಯ ಮಾಡಿದ್ದು ಯಡಿಯೂರಪ್ಪ ಕೈಲೂ ಮಾಡಿಸೋಣ : ಈಶ್ವರಪ್ಪ

10:04 PM Mar 16, 2021 | Team Udayavani |

ವಿಧಾನಸಭೆ: ಸಿದ್ದರಾಮಯ್ಯ ಅವರು ಮಾಡಿದ್ದು ಯಡಿಯೂರಪ್ಪ ಅವರಿಂದಲೂ ಮಾಡಿಸೋಣ ಎಂದು ಜಲಸಂಪನ್ಮೂಲ ಸಚಿವ ಕೆ.ಎಸ್‌. ಈಶ್ವರಪ್ಪ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ ಭರವಸೆ ನೀಡಿದರು.

Advertisement

ಶ್ರೀನಿವಾಸಪುರ ಕ್ಷೇತ್ರದ 20 ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಕೊಳವೆ ಬಾವಿ ಕೊರೆದಿರುವ ಹಣ ಪಾವತಿಯಾಗದ ಬಗ್ಗೆ ರಮೇಶ್‌ಕುಮಾರ್‌ ಪ್ರಸ್ತಾಪಿಸಿದಾಗ ಹಣಕಾಸಿನ ಲಭ್ಯತೆ ಇಲ್ಲದಿರುವುದು, ಹಣಕಾಸು ಇಲಾಖೆ ಅಧಿಕಾರಿಗಳ ಆಕ್ಷೇಪ, ಕಾರ್ಯಪಡೆಯಲ್ಲಿ ಕ್ರಿಯಾಯೋಜನೆ ರೂಪಿಸಿ ಅನುಮತಿ ಪಡೆಯದಿದ್ದರೆ ಮಂಜೂರಾತಿ ಕಷ್ಟ . ಈಗಲೇ ಅಲ್ಲ ಸಿದ್ದರಾಮಯ್ಯ ಅವರ ಅವಧಿಯಲ್ಲೂ ಹೀಗೇ ಆಗಿತ್ತು ಎಂದು ಈಶ್ವರಪ್ಪ ಹೇಳಿದರು.

ಆಗ, ರಮೇಶ್‌ಕುಮಾರ್‌ ಅವರು ನೀವು ಅಧಿಕಾರಿಗಳ ಉತ್ತರ ಪಡೆದು ಹೇಳಿದರೆ ನಿಮ್ಮ ವ್ಯಕ್ತಿತ್ವ ಕಳೆದುಕೊಳ್ಳುತ್ತೀರಿ. ಅಧಿಕಾರಿಗಳ ಮನೆಯಲ್ಲಿ ಶವರ್‌ ತಿರುಗಿಸಿದರೆ ನೀರು ಬರುತ್ತೆ. ಹಳ್ಳಿಗಳಲ್ಲಿ ನೀರಿಗಾಗಿ ಜನರು ಪಡುತ್ತಿರುವ ಕಷ್ಟ ಇವರಿಗೇನು ಗೊತ್ತು ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಅವಧಿಯಲ್ಲಿ ಇದೇ ರೀತಿ ಸಮಸ್ಯೆಯಾದಾಗ 48 ಕೋಟಿ ರೂ. ಮಂಜೂರು ಮಾಡಿಸಲಾಗಿತ್ತು ಎಂದು ತಿಳಿಸಿದರು.

ಇದನ್ನೂ ಓದಿ :ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಹೊಸ ತಿರುವು : ಯುವತಿಯ ಅಪಹರಣವಾಗಿದೆ ಎಂದು ಪೋಷಕರ ದೂರು

Advertisement

ಆಗ, ಈಶ್ವರಪ್ಪ ಅವರು ಆಗ ಸಿದ್ದರಾಮಯ್ಯ ಅವರು ಮಾಡಿದ್ದು ಈಗ ಯಡಿಯೂರಪ್ಪ ಅವರ ಕೈಲಿ ಮಾಡಿಸೋಣ ಎಂದರು. ನೀವು ನಮ್ಮ ಜತೆ ಇದ್ದರೆ ಅವರೂ ಒಪ್ಪಿಕೊಳ್ಳುತ್ತಾರೆ ಎಂದು ರಮೇಶ್‌ಕುಮಾರ್‌ ಚಟಾಕಿ ಹಾರಿಸಿದರು. ಅದಕ್ಕೆ ಈಶ್ವರಪ್ಪ ಅವರು ನೀವು ಜತೆಗಿದ್ದರೆ ಸಾಕು ಎಂದರು.

ಶಾಸಕರು ಕುಡಿಯುವ ನೀರಿಗಾಗಿ ಪಡುತ್ತಿರುವ ಪಡಿಪಾಟಲು ಅಧಿಕಾರಿಗಳಿಗೂ ಗೊತ್ತಾಗಬೇಕು. ಅರ್ಧ ಗಂಟೆ ಕಾಲ ಚರ್ಚೆಗೆ ಅವಕಾಶ ಕೊಡಿ. ಮುಖ್ಯಮಂತ್ರಿಯವರು ಇರಲಿ, ನಾನೂ ಇರುತ್ತೇನೆ, ಅಧಿಕಾರಿಗಳು ಇರಲಿ, ಅವರಿಗೂ ಎಲ್ಲವೂ ಗೊತ್ತಾಗಲಿ ಎಂದು ಸ್ಪೀಕರ್‌ ಅವರಿಗೆ ಮನವಿ ಮಾಡಿದರು. ಅದಕ್ಕೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒಪ್ಪಿದರು.

Advertisement

Udayavani is now on Telegram. Click here to join our channel and stay updated with the latest news.

Next