Advertisement

ಅಗರ್ವಾಲ್‌ಗೆ “ಮಂಕಡ್‌’ಎಚ್ಚರಿಕೆ ನೀಡಿದ ಕೃಣಾಲ್‌ ಪಾಂಡ್ಯ

09:18 AM Apr 01, 2019 | Team Udayavani |

ಮೊಹಾಲಿ: ಮೊನ್ನೆಯಷ್ಟೇ ರಾಜಸ್ಥಾನ್‌ ತಂಡದ ಜಾಸ್‌ ಬಟ್ಲರ್‌ ಅವರನ್ನು ಪಂಜಾಬ್‌ ನಾಯಕ ಆರ್‌. ಅಶ್ವಿ‌ನ್‌ “ಮಂಕಡ್‌ ಔಟ್‌’ ಮಾಡಿದ್ದು ಕೇವಲಮ ಐಪಿಎಲ್‌ನಷ್ಟೇ ಅಲ್ಲ, ಜಾಗತಿಕ ಕ್ರಿಕೆಟ್‌ನಲ್ಲೇ ದೊಡ್ಡ ಸುದ್ದಿಯಾಗಿತ್ತು. ಇದು ವ್ಯಾಪಕ ಪರ-ವಿರೋಧ ಚರ್ಚೆಗೆ ಒಳಗಾಗಿತ್ತು. ಇದು ಕ್ರಿಕೆಟ್‌ ನಿಯಮದ ವ್ಯಾಪ್ತಿಯಲ್ಲಿದ್ದ ಕಾರಣ ಅಶ್ವಿ‌ನ್‌ ದನ್ನು ಸಮರ್ಥಿಸಿಕೊಂಡಿದ್ದರು.

Advertisement

ಶನಿವಾರ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಇಂಥದೇ ವಿದ್ಯಮಾನ ಪುನರಾವರ್ತನೆ ಯಾಗುವ ಸಾಧ್ಯತೆ ಇತ್ತು. ಮುಂಬೈ ಇಂಡಿಯನ್ಸ್‌ ಬೌಲರ್‌ ಕೃಣಾಲ್‌ ಪಾಂಡ್ಯ 10ನೇ ಓವರ್‌ ಎಸೆಯುವಾಗ ಪಂಜಾಬ್‌ನ ಮಾಯಾಂಕ್‌ ಅಗರ್ವಾಲ್‌ ಕ್ರೀಸ್‌ ಬಿಟ್ಟು ಮುಂದೆ ಹೋಗಿಯಾಗಿತ್ತು.

ಆಗ ರನೌಟ್‌ ಮಾಡುವ ಅವಕಾಶವಿದ್ದರೂ ಕೃಣಾಲ್‌ ಇದಕ್ಕೆ ಮುಂದಾಗಲಿಲ್ಲ. ಅಗರ್ವಾಲ್‌ಗೆ ಕೇವಲ ಎಚ್ಚರಿಕೆ ನೀಡಿದರು. ಕೃಣಾಲ್‌ ಅವರ ಈ ವರ್ತನೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next