Advertisement

Mandya: 3ನೇ ಬಾರಿಗೆ ಗರಿಷ್ಠ ಮಟ್ಟ ತಲುಪಿದ ಕೆಆರ್‌ಎಸ್‌

12:39 AM Oct 18, 2024 | Team Udayavani |

ಮಂಡ್ಯ: ಕೃಷ್ಣರಾಜ ಸಾಗರ ಜಲಾಶಯವು ಪ್ರಸ್ತುತ ವರ್ಷ 3ನೇ ಬಾರಿಗೆ ಗರಿಷ್ಠ ಮಟ್ಟ ತಲುಪಿದೆ. ಕಳೆದ ಜು. 24ರಂದು ಗರಿಷ್ಠ ಮಟ್ಟ 124.80 ಅಡಿ ತಲುಪಿತ್ತು.

Advertisement

ಅನಂತರ ಜು. 29ರಂದು ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಿದ್ದರು. ಅದಾದ ಬಳಿಕ ನಿರಂತರವಾಗಿ ಗರಿಷ್ಠ ಮಟ್ಟ 124.80ರ ಆಸುಪಾಸಿದಲ್ಲಿಯೇ ಮುಂದುವರಿದಿತ್ತು. ಅ. 14ರಂದು ಮತ್ತೆ ಗರಿಷ್ಠ ಮಟ್ಟ 124.80 ಅಡಿ ಮುಟ್ಟಿದೆ. ಕಾವೇರಿ ನದಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಮುಂದುವರಿದ ಕಾರಣ ಜಲಾಶಯಕ್ಕೆ 10 ಸಾವಿರ ಕ್ಯುಸೆಕ್‌ ಒಳಹರಿವು ಬರುತ್ತಿದೆ.

ಗರಿಷ್ಠಮಟ್ಟ ತಲುಪಿರುವುದರಿಂದ ಬರುತ್ತಿರುವ ಒಳಹರಿವನ್ನು ನದಿಗೆ ಹಾಗೂ ನಾಲೆಗಳಿಗೆ ಹರಿಸಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next