Advertisement

ಕೃತ್ಯ: ಎರಡನೇ ಬಾರಿ ನಾಯಕನಾಗಿ ಆಸ್ಕರ್‌ ಕೃಷ್ಣ

11:18 AM Mar 23, 2022 | Team Udayavani |

“ಕೃತ್ಯ’- ಹೀಗೊಂದು ಚಿತ್ರ ತಯಾರಾಗುತ್ತಿದೆ. ಈ ಹಿಂದೆ “ಆಸ್ಕರ್‌’, “ಮಿಸ್‌ ಮಲ್ಲಿಗೆ’, “ಮೋನಿಕಾ ಈಸ್‌ ಮಿಸ್ಸಿಂಗ್‌’, “ಮನಸಿನ ಮರೆಯಲಿ’ ಹಾಗೂ ಇತ್ತೀಚಿಗೆ ಬಿಡುಗಡೆಯಾಗಿರುವ “ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ ಬಿಟ್ಟ’ ಚಿತ್ರಗಳನ್ನು ನಿರ್ದೇಶಿಸಿರುವ ಆಸ್ಕರ್‌ ಕೃಷ್ಣ ಈಗ “ಕೃತ್ಯ’ ಎನ್ನುವ ಸಿನಿಮಾಕ್ಕೆ ನಿರ್ದೇಶನ, ನಿರ್ಮಾಣ ಮಾಡುವ ಜತೆಗೆ ಎರಡನೇ ಬಾರಿ ನಾಯಕನಾಗಿ ನಟಿಸುತ್ತಿದ್ದಾರೆ.

Advertisement

ಇತ್ತೀಚೆಗೆ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದ್ದು, ನಟ ಶ್ರೀಮುರಳಿ ಪೋಸ್ಟರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಗೌತಮ್‌ ರಾಮಚಂದ್ರ ಎಂಬುವವರು ಈ ಚಿತ್ರದ ಮೂಲಕ ಸಹ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆಸ್ಕರ್‌ ಕೃಷ್ಣರೊಂದಿಗೆ ಹಲವು ವರ್ಷಗಳಿಂದ ಒಡನಾಟದಲ್ಲಿರುವ ಇವರು ಸಾಫ್ಟ್ವೇರ್‌ ಉದ್ಯೋಗಿ. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಇವರ ಜೊತೆ ಸೇರಿಕೊಂಡು ಬಂಡವಾಳ ಹೂಡುತ್ತಿದ್ದು, ಮುಂದೆ ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಿಸುವ ಬಯಕೆ ಹೊಂದಿದ್ದಾರಂತೆ. ಚಿತ್ರದ ನಾಯಕಿ, ತಾರಗಣ ಮತ್ತು ತಂತ್ರಜ್ಞರು ಇನ್ನಷ್ಟೇ ಆಯ್ಕೆಯಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next