Advertisement

ಕೃಷ್ಣಾಪುರ ಪರ್ಯಾಯೋತ್ಸವ: ವಾಹನ ಸಂಚಾರ ಮಾರ್ಗ ಬದಲು

05:11 PM Jan 16, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಜ. 17, 18ರಂದು ಕೃಷ್ಣಾಪುರ ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಸುಗಮ ಗೊಳಿಸಲು ಬದಲಿ ಮಾರ್ಗದ ಕುರಿತು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಆದೇಶ ಹೊರಡಿಸಿದ್ದಾರೆ.

Advertisement

ಜ. 17ರ ಸಂಜೆ 7ರಿಂದ ಜ. 18ರ ಬೆಳಗ್ಗೆ 7ರ ವರೆಗೆ ಉಡುಪಿ ನಗರಕ್ಕೆ ಯಾವುದೇ ವಾಹನ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಬದಲಿ ಮಾರ್ಗದ ವಿವರ ಈ ಅವಧಿಗೆ ಮಾತ್ರ ಅನ್ವಯಿಸುತ್ತದೆ.

ಕುಂದಾಪುರ ಕಡೆಯಿಂದ ಉಡುಪಿ, ಮಣಿಪಾಲ ಕಡೆಗೆ ಬರುವ ವಾಹನಗಳಿಗೆ ಸಂಜೆ 7ರ ಅನಂತರ ಕರಾವಳಿ ಜಂಕ್ಷನ್‌ ಅಂತಿಮ ನಿಲುಗಡೆಯಾಗಿರುತ್ತದೆ. ನಿಟ್ಟೂರು, ಅಂಬಾಗಿಲು, ಸಂತೆಕಟ್ಟೆ ಮಾರ್ಗವಾಗಿ ಕುಂದಾಪುರ ಕಡೆಗೆ ಹೋಗಬೇಕು.

ಮಣಿಪಾಲಕ್ಕೆ ಹೋಗುವ ವಾಹನಗಳು ಅಂಬಾಗಿಲು, ಪೆರಂಪಳ್ಳಿ, ಕಾಯಿನ್‌ ಸರ್ಕಲ್‌, ಸಿಂಡಿಕೇಟ್‌ ಸರ್ಕಲ್‌ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗಬೇಕು.

ಕುಕ್ಕಿಕಟ್ಟೆ, ಮೂಡುಬೆಳ್ಳೆ, ಅಲೆವೂರು, ಕೊರಂಗ್ರಪಾಡಿ, ಬೈಲೂರು ಕಡೆಗಳಿಗೆ ಹೋಗುವ ಮತ್ತು ಬರುವಂತಹ ವಾಹನಗಳು ಬೀಡಿನಗುಡ್ಡೆ, ಶಾರದಾ ಕಲ್ಯಾಣ ಮಂಟಪ, ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್‌ ಬಸ್‌ ನಿಲ್ದಾಣಕ್ಕೆ ಪ್ರವೇಶಿಸಬೇಕು. ಸಂಜೆ 7ರ ಅನಂತರ ಮಿಷನ್‌ ಕಾಂಪೌಂಡ್‌ ರಸ್ತೆ ಅಂತಿಮ ನಿಲುಗಡೆಯಾಗಿದೆ.

Advertisement

ಇದನ್ನೂ ಓದಿ:ಪರ್ಯಾಯೋತ್ಸವ: ಕಂಗೊಳಿಸುತ್ತಿರುವ ಉಡುಪಿ

ಮಲ್ಪೆಯಿಂದ ಉಡುಪಿಗೆ ಬರುವ ವಾಹನಗಳು ಸಂಜೆ 7ರ ನಂತರ ಆದಿಉಡುಪಿ ಜಂಕ್ಷನ್‌ವರೆಗೆ ಆಗಮಿಸಿ, ಅಲ್ಲಿಂದಲೇ ವಾಪಾಸ್‌ ಹೋಗಬೇಕು.

ಕಾರ್ಕಳ, ಮಣಿಪಾಲಕ್ಕೆ ಹೋಗಿ ಬರುವಂತಹ ವಾಹನಗಳು ಸಂಜೆ 7ರ ಅನಂತರ ಮಣಿಪಾಲ, ಸಿಂಡಿಕೇಟ್‌ ಸರ್ಕಲ್‌ ನಿಂದ ಕಾಯಿನ್‌ ಸರ್ಕಲ್‌, ಪೆರಂಪಳ್ಳಿ, ಅಂಬಾಗಿಲು, ನಿಟ್ಟೂರು ಮಾರ್ಗ ವಾಗಿ ಕರಾವಳಿ ಜಂಕ್ಷನ್‌ ಆಗಮಿಸಿ, ಅಲ್ಲಿಂದಲೇ ವಾಪಾಸ್‌ ಆಗಬೇಕು.

ಮಂಗಳೂರಿನಿಂದ ಮುಂಬಯಿ ಕಡೆಗೆ ಮತ್ತು ಬೆಂಗಳೂರಿಗೆ ಹೋಗುವ ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಜೆ 7ರ ನಂತರ ಕರಾವಳಿ ಜಂಕ್ಷನ್‌ನಿಂದ ಪ್ರಯಾಣಿಕರನ್ನು ಕರೆದುಕೊಂಡು ಹೋಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next