Advertisement

Krishnam Pranaya Sakhi; ಸದ್ದು ಮಾಡುತ್ತಿದೆ ಗಣೇಶ್ ಚಿತ್ರದ ರೊಮ್ಯಾಂಟಿಕ್ ಹಾಡು

12:59 PM Jul 22, 2024 | Team Udayavani |

ನಟ ಗಣೇಶ್‌ ಅವರ “ಕೃಷ್ಣಂ ಪ್ರಣಯ ಸಖೀ’ ಚಿತ್ರದ “ಚಿನ್ನಮ್ಮ…’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಈಗ ಚಿತ್ರತಂಡ ಮತ್ತೂಂದು ಹಾಡು ಬಿಡುಗಡೆ ಮಾಡಿದೆ. “ದ್ವಾಪರ ದಾಟುತ ನನ್ನನೇ ನೋಡಲು, ನನ್ನನೇ ಸೇರಲು ಬಂದ ರಾಧಿಕೆ..’ ಎಂಬ ಹಾಡು ಬಿಡುಗಡೆಯಾಗಿದ್ದು, ರೊಮ್ಯಾಂಟಿಕ್‌ ಮೆಲೋಡಿಯಾಗಿ ಮೆಚ್ಚುಗೆ ಪಡೆಯುತ್ತಿದೆ.

Advertisement

ಶ್ರೀನಿವಾಸರಾಜು ಈ ಚಿತ್ರದ ನಿರ್ದೇಶಕರು. ಪ್ರಶಾಂತ್‌ ಜಿ ರುದ್ರಪ್ಪ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಚಿತ್ರ ಆಗಸ್ಟ್‌ 15ರಂದು ತೆರೆಕಾಣುತ್ತಿದೆ. ಚಿತ್ರದ ಮೇಲೆ ನಟ ಗಣೇಶ್‌ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಕಥೆ.

ಫ್ಯಾಮಿಲಿ ಡ್ರಾಮಾ ಸಿನಿಮಾವನ್ನು ಗಣೇಶ್‌ ಈಗಾಗಲೇ ಸಾಕಷ್ಟು ಮಾಡಿದ್ದಾರೆ. ಆದರೆ, ಇಂತಹ ಕಥೆಯನ್ನು ಮಾಡಿಲ್ಲ. “ಇಂತಹ ಕಥೆ ಸಿಗೋದು ವಿರಳ. ಇದು ಕೇವಲ ಫ್ಯಾಮಿಲಿ ಡ್ರಾಮಾವಲ್ಲ. ಇಲ್ಲೊಂದು ಥ್ರಿಲ್ಲರ್‌ ಅಂಶವಿದೆ. ಅದು ಇಡೀ ಸಿನಿಮಾವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ಯುತ್ತದೆ. ಸಿನಿಮಾ ಆರಂಭವಾಗಿ 10 ನಿಮಿಷದಿಂದಲೇ ಪ್ರೇಕ್ಷಕರಲ್ಲಿ ಹಲವು ಕುತೂಹಲ, ಪ್ರಶ್ನೆಗಳು ಮೂಡುತ್ತವೆ. ಆ ಮಟ್ಟಿಗೆ ನಿರ್ದೇಶಕ ಶ್ರೀನಿವಾಸರಾಜು ಥ್ರಿಲ್ಲರ್‌ ಅಂಶವನ್ನು ಫ್ಯಾಮಿಲಿ ಕಥೆಗೆ ತುಂಬಾ ಚೆನ್ನಾಗಿ ಬ್ಲೆಂಡ್‌ ಮಾಡಿದ್ದಾರೆ’ ಎನ್ನುತ್ತಾರೆ.

ಇದು ಗಣೇಶ್‌ ಅಭಿನಯದ 41 ನೇ ಚಿತ್ರ. ಗಣೇಶ್‌ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್‌ ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next