Advertisement

ಸಿಎಂ ಆಗಲು ಗೌಡರ ಮನೆ ಮುಂದೆ ನಿಂತಿದ್ದರು ಕೃಷ್ಣ

11:29 PM Dec 25, 2019 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ.ಕೃಷ್ಣ ಅವರು, 2004ರಲ್ಲಿ ಕಾಂಗ್ರೆಸ್‌ ರಾಜ್ಯದಲ್ಲಿ ಸೋಲು ಕಂಡಾಗ, ಜೆಡಿಎಸ್‌ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗಲು ದೇವೇ ಗೌಡರ ಮನೆ ಮುಂದೆ ನಿಂತಿ ದ್ದರು. ಈ ಸತ್ಯ ಕೃಷ್ಣ ಅವರ ಕೃತಿ ಗಳಲ್ಲಿ ದಾಖಲಾಗಲಿ ಎಂದು ಜೆಡಿಎಸ್‌ ಹೇಳಿದೆ.

Advertisement

ಎಸ್‌.ಎಂ.ಕೃಷ್ಣ ಅವರ “ಸ್ಮತಿ ವಾಹಿನಿ’ ಹಾಗೂ “ಭವಿಷ್ಯ ದರ್ಶನ’ ಕೃತಿ ಗಳಲ್ಲಿ ಎಂಬತ್ತರ ದಶಕದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಎಸ್‌.ಆರ್‌. ಬೊಮ್ಮಾಯಿ ಅವರೊಂದಿಗೆ ಕಾಂಗ್ರೆಸ್‌ ಸೇರಲು ಬಯಸಿದ್ದ ಬಗ್ಗೆ ಉಲ್ಲೇಖೀಸಿ ರುವುದಕ್ಕೆ ಜೆಡಿಎಸ್‌ ರಾಷ್ಟ್ರೀಯ ವಕ್ತಾರ ರಮೇಶ್‌ಬಾಬು ಆಕ್ಷೇಪ ವ್ಯಕ್ತಪಡಿಸಿ, ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಎಸ್‌.ಎಂ.ಕೃಷ್ಣ ತಮ್ಮ ಆತ್ಮಚರಿತ್ರೆಯಲ್ಲಿ ದೇವೇಗೌಡರು ಕಾಂಗ್ರೆಸ್‌ ಸೇರಲು ಬಯಸಿದ್ದರು ಎಂದು ಹೇಳಿರು ವುದನ್ನು ಅಕಾಡೆಮಿಕ್‌ ಹಿನ್ನೆಲೆ ಯಲ್ಲಿ ನೋಡಬೇಕಿದೆ. ಈ ದೇಶದ ಸ್ವಾತಂತ್ರ್ಯ ಚಳುವಳಿ ರೂಪಿಸಿದ ಕಾಂಗ್ರೆಸ್‌, ಬಹುತೇಕ ಪಕ್ಷಗಳಿಗೆ ಮೂಲ ಪಕ್ಷವಾಗಿದೆ. ಎಸ್‌.ಎಂ.ಕೃಷ್ಣ ಅವರು ಪಿಎಸ್‌ಪಿ ಪಕ್ಷದವರಾಗಿದ್ದು ಮೂಲ ಕಾಂಗ್ರೆಸ್ಸಿಗರು ಅಲ್ಲ ಎಂದಿದ್ದಾರೆ.

ಆತ್ಮಚರಿತ್ರೆಗಳು ನಮಗೆ ಮಾಹಿತಿ ಜೊತೆಗೆ ದಾರಿ ದೀಪವಾಗಬೇಕು. ಸತ್ಯವನ್ನು ಮರೆ ಮಾಚುವ ಪುಸ್ತಕವಾಗಬಾರದು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next