Advertisement

ಕೃಷ ಸೀರೀಸ್ ನಲ್ಲಿ ಲವರ್ ಬಾಯ್

10:40 AM May 05, 2020 | Suhan S |

ಕನ್ನಡದಲ್ಲಿ ಈಗಾಗಲೇ ಕೃಷ್ಣ ಸೀರೀಸ್‌ ಸಿನಿಮಾಗಳು ಬಂದಿರೋದು ಗೊತ್ತೇ ಇದೆ. ಈಗ ಆ ಸಾಲಿಗೆ ಈಗ “ಕೃಷ್ಣ ಟಾಕೀಸ್‌ ‘ ಕೂಡ ಸೇರಿದೆ.

Advertisement

ಹೌದು, ಕೃಷ್ಣ ಅಂದಾಕ್ಷಣ ಕನ್ನಡ ಚಿತ್ರರಂಗದಲ್ಲಿ ನೆನಪಾಗೋದೇ, ಅಜೇಯ್‌ರಾವ್‌. “ಕೃಷ್ಣನ್‌ ಲವ್‌ಸ್ಟೋರಿ ‘, “ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ ‘, “ಕೃಷ್ಣ ಲೀಲಾ ‘, “ಕೃಷ್ಣ ಸನ್‌ ಆಫ್ ಸಿಎಂ ‘ ಹೀಗೆ ಕೃಷ್ಣ ಹೆಸರಿನ ಸಿನಿಮಾಗಳಲ್ಲಿ ನಾಯಕರಾಗಿ ಕಾಣಿಸಿಕೊಂಡ ಅವರು ಈಗ ಮತ್ತದೇ ಕೃಷ್ಣ ಸೀರೀಸ್‌ ಸಿನಿಮಾ ಮಾಡಿದ್ದಾರೆ. ಈ ಎಲ್ಲಾ ಚಿತ್ರಗಳಲ್ಲೂ ಅಜೇಯ್‌ರಾವ್‌ ವಿಭಿನ್ನ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ.

ಅಂದಹಾಗೆ ಈಗಾಗಲೇ “ಕೃಷ್ಣ ಟಾಕೀಸ್‌ ‘ ಚಿತ್ರ ಚಿತ್ರೀಕರಣಗೊಂಡು ತೆರೆಗೆ ಬರಲು ಸಜ್ಜಾಗಿದೆ. ಇಷ್ಟರಲ್ಲೇ ಸೆನ್ಸಾರ್‌ ಮಂಡಳಿ ಈ ಚಿತ್ರವನ್ನು ವೀಕ್ಷಿಸಲಿದೆ. ಗೋಕುಲ್‌ ಎಂಟರ್‌ ಟೈನರ್‌ ಬ್ಯಾನರ್‌ನಲ್ಲಿ ಗೋವಿಂದರಾಜು ಎ.ಹೆಚ್‌. ಈ ಚಿತ್ರಕ್ಕೆ ನಿರ್ಮಾಪಕರು. ವಿಜಯಾನಂದ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸದ್ಯಕ್ಕೆ  ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಇರುವುದರಿಂದ ಚಿತ್ರರಂಗ ಸ್ಥಗಿತಗೊಂಡಿದೆ.

ಕೋವಿಡ್ 19  ಲಾಕ್‌ ಡೌನ್‌ ಮುಗಿದ ಮೇಲೆ “ಕೃಷ್ಣ ಟಾಕೀಸ್‌ ‘ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಜೇಯ್‌ ರಾವ್‌ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರದ ಬಗ್ಗೆ ವಿವರಿಸುವುದಕ್ಕಿಂತ ಸಿನಿಮಾದಲ್ಲೇ ನೋಡಬೇಕು ಎಂಬುದು ಚಿತ್ರತಂಡದ ಮಾತು. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದೆ. ಅಜೇಯ್‌ರಾವ್‌ ಈ ಹಿಂದೆ ಯಾವುದೇ ಸಿನಿಮಾಗಳಲ್ಲೂ ಈ ರೀತಿಯ ಪಾತ್ರ ನಿರ್ವಹಿಸಿರಲಿಲ್ಲ. ಈ ಚಿತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ.

ಈಗಾಗಲೇ ಚಿತ್ರದ ಟೀಸರ್‌ ಹಾಗು ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿದ್ದು ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿವೆ. ಚಿತ್ರಕ್ಕೆ ಶ್ರೀಧರ್‌ ವಿ.ಸಂಭ್ರಮ್‌ ಸಂಗೀತವಿದೆ. ಅಭಿಷೇಕ್‌ ಕಾಸರಗೋಡು ಛಾಯಾಗ್ರಹಣವಿದೆ. ಅಜೇಯ್‌ರಾವ್‌ಗೆ ಜೋಡಿಯಾಗಿ ಅಪೂರ್ವ, ಸಿಂಧು ಲೋಕನಾಥ್‌ ಇದ್ದಾರೆ. ಉಳಿದಂತೆ ಚಿಕ್ಕಣ್ಣ, ಮಂಡ್ಯ ರಮೇಶ್‌, ಶೋಭರಾಜ್‌, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತುಮ್ಮಿನಾಡು ಇತರರು ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next