Advertisement

ಕೃಷ್ಣಾಷ್ಟಮಿ ದಿನ ಕೃಷ್ಣ ಟಾಕೀಸ್‌ ಸೆನ್ಸಾರ್‌

04:27 PM Aug 14, 2020 | Suhan S |

ಅಜೇಯ್‌ರಾವ್‌ ಅಭಿನಯದ “ಕೃಷ್ಣ ಟಾಕೀಸ್‌’ ಚಿತ್ರ ಸೆನ್ಸಾರ್‌ ಪಾಸ್‌ ಆಗಿದೆ. ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣ ನೀಡಿದೆ. ಈ ಸೆನ್ಸಾರ್‌ನ ವಿಶೇಷವೆಂದರೆ ಚಿತ್ರದ ಸೆನ್ಸಾರ್‌ ಆಗಿದ್ದು, ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು. ಹಾಗಾಗಿ, ಕೃಷ್ಣ ಟಾಕೀಸ್‌ ತಂಡ ಖುಷಿಯಾಗಿದೆ.

Advertisement

ಈ ಚಿತ್ರವನ್ನು ಗೋಕುಲ ಎಂಟರ್‌ಟೈನರ್‌ ಬ್ಯಾನರ್‌ನಲ್ಲಿ ಗೋವಿಂದರಾಜು ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುವ ನಿರ್ಮಾಪಕರು, ಸಿನಿಮಾ ತುಂಬಾ ಚೆನ್ನಾಗಿ ಚೆನ್ನಾಗಿ ಮೂಡಿಬಂದಿದೆ. ಸಿನಿಮಾ ನೋಡಿದ ನಾಯಕ ಅಜೇಯ್‌ ರಾವ್‌ ಖುಷಿಯಾಗಿದ್ದಾರೆ. ಸಿನಿಮಾಕ್ಕೇನು ಬೇಕೋ ಅದನ್ನು ನೀಡೋದು ನನ್ನ ಜವಾಬ್ದಾರಿ. ಅದನ್ನು ನೀಡಿದ್ದೇನೆ. ನಿರ್ದೇಶಕರು ಹೇಳಿದಂತೆ ಸಿನಿಮಾ ಮಾಡಿಕೊಟ್ಟಿದ್ದಾರೆ. ಶ್ರೀಧರ್‌ ಸಂಭ್ರಮ್‌ ಅವರ ಹಾಡುಗಳು ಕೂಡಾ ಅದ್ಭುತವಾಗಿವೆ ಎನ್ನುತ್ತಾರೆ ಗೋವಿಂದರಾಜು.

ಚಿತ್ರದ ಬಗ್ಗೆ ಹೇಳುವ ನಿರ್ದೇಶಕ ವಿಜಯಾನಂದ್‌, “ಇದೊಂದು ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರ. ಸುಮಾರು ವರ್ಷಗಳ ಹಿಂದೆ ಲಕ್ನೋದ ಚಿತ್ರಮಂದಿರವೊಂದರಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಈ ಚಿತ್ರ ಮಾಡಲಾಗುತ್ತಿದೆ. ಚಿತ್ರ ಕ್ಷಣ ಕ್ಷಣವೂ ಕುತೂಹಲ ಹೆಚ್ಚಿಸುತ್ತಾ ಸಾಗಿ, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎನ್ನುತ್ತಾರೆ. ಅಂದಹಾಗೆ, “ಕೃಷ್ಣ ಟಾಕೀಸ್‌’ ಚಿತ್ರಕ್ಕೆ ವಿ. ಶ್ರೀಧರ್‌ ಸಂಭ್ರಮ್‌ ಸಂಗೀತವಿದೆ. ವಿಲಿಯಮ್‌ ಡೇವಿಡ್‌ ಛಾಯಾಗ್ರಹಣ ಮಾಡಿದರೆ, ಶ್ರೀಕಾಂತ್‌ ಸಂಕಲನವಿದೆ.

ಚಿತ್ರದಲ್ಲಿ ಸಿಂಧು ಲೋಕನಾಥ್‌, ಚಿಕ್ಕಣ್ಣ, ಪ್ರಮೋದ್‌ ಶೆಟ್ಟಿ, ಪ್ರಕಾಶ್‌, ಶೋಭರಾಜ್‌, ಮಂಡ್ಯ ರಮೇಶ್‌, ನಿರಂತ್‌, ಯಶ್‌ ಶೆಟ್ಟಿ, ಉಮೇಶ್‌, ಶ್ರೀನಿವಾಸ ಪ್ರಭು, ಲಕ್ಷ್ಮೀ ಗೌಡ, ಯಮುನಾ, ಧರ್ಮೇಂದ್ರ ಅರಸ್‌, ಶಂಕರ್‌ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next