Advertisement

ಕೃಷ್ಣ ಕೋಳಿಯಾಗಿ ಕೂಗಿ, ಭೀಮನ ಸಾಹಸಕ್ಕೆ ತಡೆಯಾದ…

07:16 PM Nov 01, 2019 | Lakshmi GovindaRaju |

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಒಂದು ಬೆಟ್ಟ. ಇಲ್ಲೊಂದು ಪುಟ್ಟ ನದಿಯಿದೆ. ಶ್ರೀ ಕೃಷ್ಣ, ರಾತ್ರೋರಾತ್ರಿ ಪಾಂಡವರಿಗೆ ಒಂದು ಸವಾಲು ಹಾಕುತ್ತಾನೆ. ಬೆಳಗಾಗುವ ಮುನ್ನ, ಈ ನದಿಗೆ ಸೇತುವೆ ಕಟ್ಟುವಂತೆ ಸೂಚಿಸುತ್ತಾನೆ. ಭೀಮ ಇನ್ನೇನು ಒಂದು ಬೃಹತ್‌ ಕಲ್ಲನ್ನು ಎತ್ತಿ ಇಟ್ಟಿದ್ದರೆ, ಸೇತುವೆ ಕಾರ್ಯ ಪೂರ್ಣಗೊಳ್ಳುತ್ತಿತ್ತು. ಆದರೆ, ಕೃಷ್ಣ ಮೋಸದಿಂದ, ಕೋಳಿಯಾಗಿ ಕೂಗಿ, ಬೆಳಗಾಯಿತು ಎಂದು ಸೂಚಿಸುತ್ತಾನೆ. ಭೀಮ ತನ್ನ ಕೆಲಸವನ್ನು ಅಲ್ಲಿಗೇ ನಿಲ್ಲಿಸಿದ. ಭೀಮ ಎತ್ತಿಟ್ಟ ಕಲ್ಲು ಇಲ್ಲಿ ಈಗಲೂ “ಭೀಮನಕಲ್ಲು’ ಆಗಿಯೂ, ಕೃಷ್ಣ ಕೂಗಿದ ಬೆಟ್ಟವನ್ನು “ಕೋಳಿಕ್ಕಮಲೆ’ ಅಂತಲೂ ಜನ ಕರೆಯುತ್ತಾರೆ.

Advertisement

* ಪ್ರಶಾಂತ್‌ ಕರ್ಕೇರ

Advertisement

Udayavani is now on Telegram. Click here to join our channel and stay updated with the latest news.

Next