Advertisement

ಕೃಷ್ಣಾ ನದಿ ನೀರು ಹಂಚಿಕೆ ವಿವಾದ: ಕರ್ನಾಟಕ ಮತ್ತು ಮಹಾರಾಷ್ಟ್ರ ಜಂಟಿ ಕಾನೂನು ಹೋರಾಟ

12:16 PM Jun 19, 2021 | Team Udayavani |

ಬೆಂಗಳೂರು: ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಇರುವ ಪ್ರಕರಣದ ಕುರಿತು ಜಂಟಿಯಾಗಿ ಹೋರಾಟ ಮಾಡಲು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ನಿರ್ಧಾರ ಮಾಡಿದೆ. ಇಂದು ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ್ ಪಾಟೀಲ್ ಜೊತೆ ಸಿಎಂ ಯಡಿಯೂರಪ್ಪ ನಡೆಸಿದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

Advertisement

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ವೈ, ಕೃಷ್ಣಾ, ಭೀಮಾ ನದಿಗಳ ಪ್ರವಾಹ‌ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಮಹಾರಾಷ್ಟ್ರ ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದರು. ಉಭಯ ರಾಜ್ಯಗಳು ಕ್ಷಣ ಕ್ಷಣಕ್ಕೂ ಮಳೆ ಪ್ರಮಾಣ, ನೀರು ಬಿಡುಗಡೆ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೆಗೆ ತೀರ್ಮಾನ ಮಾಡಲಾಯಿತು. ಬೇಸಿಗೆ ಕಾಲದಲ್ಲಿ 4 ಟಿಎಂಸಿ ನೀರು ಪಡೆದು, ಮಳೆಗಾಲದಲ್ಲಿ 4 ಟಿಎಂಸಿ ನೀರು ಬಿಡುಗಡೆ ಮಾಡಲು ಚರ್ಚೆ ಮಾಡಲಾಗಿದೆ ಎಂದರು.

ಇದನ್ನೂ ಓದಿ:ಕಾನ್ಪುರ್:ಸ್ವಯಂಘೋಷಿತ ಬಾಬಾನ ಆರನೇ ವಿವಾಹ ಸಂಚನ್ನು ವಿಫಲಗೊಳಿಸಿದ ಐದನೇ ಪತ್ನಿ!

ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ್ ಪಾಟೀಲ್ ಮಾತನಾಡಿ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿನ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅದರಲ್ಲಿ ಪ್ರಮುಖವಾಗಿ ಕೃಷ್ಣಾಕೊಳ್ಳದಲ್ಲಿನ ನೆರೆ ಸಮಸ್ಯೆ, ನೆರ ಹಾವಳಿಯಿಂದ ಸಮಸ್ಯೆಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕೆಂದು ಎರಡು ರಾಜ್ಯಗಳ‌ ಚರ್ಚೆಯಿಂದ‌ ಅನುಕೂಲವಾಗಿದೆ. ಇವತ್ತಿನ ಸಭೆ ಮೂರನೇ ಸಭೆಯಾಗಿದ್ದು, ದೂದ್ ಗಂಗಾ ಯೋಜನೆಗೆ ಮಹಾರಾಷ್ಟ್ರ ಸರ್ಕಾರ ಕೂಡ ಸಾಕಷ್ಟು ಅನುದಾನ ನೀಡಲಿದೆ ಎಂದ ಅವರು, ಕೃಷ್ಣಾ ಕಣಿವೆ ಕುರಿತು ಚರ್ಚೆ ನಡೆಸಲು ಸಿಎಂ‌ ಅವಕಾಶ ಮಾಡಿದಕ್ಕೆ ಧನ್ಯವಾದಗಳನ್ನು ತಿಳಿಸಿದರು.

Advertisement

ಕೃಷ್ಣಾ ನದಿ ನೀರು ಹಂಚಿಕೆ ವಿವಾದ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಇರುವ ಪ್ರಕರಣದ ಕುರಿತು ಜಂಟಿಯಾಗಿ ಹೋರಾಟಕ್ಕೆ ನಿರ್ಧಾರ ಮಾಡಿದ್ದೇವೆ ಎಂದರು.

ಬಳಿಕ ಮಾತನಾಡಿದ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪ್ರವಾಹ ಬಂದಾಗ ಒಂದೇ ಸಲ ನೀರು ಬಿಡಬೇಡಿ ಎಂದು ಕೇಳಿಕೊಳ್ಳಲಾಗಿದೆ. ಅದಕ್ಕೆ ಮಹಾರಾಷ್ಟ್ರ ಸಚಿವರು ಒಪ್ಪಿಕೊಂಡಿದ್ದಾರೆ. ದೂದ್ ಗಂಗಾ ಯೋಜನೆಗೆ ಮಹಾರಾಷ್ಟ್ರ ಪಾಲನ್ನು ನೀಡಲು ಒಪ್ಪಿಕೊಂಡಿದ್ದಾರೆ. ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಆಗುತ್ತಿತ್ತು ,ಅದಕ್ಕೆ ನಾಲ್ಕು ಟಿಎಂಸಿ ನೀರು ಕೊಡುಕೊಳ್ಳುವಿಕೆ ಬಗ್ಗೆ ಒಪ್ಪಿಗೆ ಆಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next