Advertisement

ಕೃಷ್ಣಾ ನೀ ಬೇಗನೆ ಬಾರೋ’ಎಂದ ಟಿ.ಎಂ.ಕೃಷ್ಣ

09:10 PM Mar 23, 2022 | Team Udayavani |

ಉಡುಪಿ: ಪ್ರಸಿದ್ಧ ಸಂಗೀತಕಾರ ಟಿ.ಎಂ.ಕೃಷ್ಣ ಅವರು ಬುಧವಾರ ಶ್ರೀಕೃಷ್ಣಮಠಕ್ಕೆ ಸಾಮಾನ್ಯರಾಗಿ ಭೇಟಿ ಕೊಟ್ಟು ಎರಡು ಕೀರ್ತನೆಗಳನ್ನು ಹಾಡಿದರು.

Advertisement

ಯಾವ ಮುನ್ಸೂಚನೆ  ಇಲ್ಲದೆ ಸರತಿಸಾಲಿನಲ್ಲಿ ನಿಂತು ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಹೊತ್ತಿನಲ್ಲಿ ಮಹಾಪೂಜೆ ನಡೆಯುತ್ತಿದ್ದ ಕಾರಣ ಮಠದ ಭಾಗವತ ನಾರಾಯಣ ಸರಳಾಯರು ಹಾಡುತ್ತಿದ್ದುದನ್ನು ಟಿ.ಎಂ. ಕೃಷ್ಣ ನೋಡಿ ಉಭಯಕುಶಲೋಪರಿ ಮಾತುಗಳನ್ನಾಡಿದರು.

ಇದನ್ನೂ ಓದಿ:ಗೋವಾ: ಇನ್ನು ಕೊಂಕಣ ರೈಲ್ವೆ ಮಾಲಿನ್ಯ ಮುಕ್ತ ಪ್ರಯಾಣ ಆರಂಭ

ಮೊದಲು ವ್ಯಾಸರಾಜರ “ಕೃಷ್ಣಾ ನೀ ಬೇಗನೆ ಬಾರೋ’ ಕೃತಿಯನ್ನು ಹಾಡಿದ ಟಿ.ಎಂ.ಕೃಷ್ಣ, ಮಹಾಪೂಜೆ ಬಳಿಕ ಕನಕದಾಸರ “ಬಾರೋ ಕೃಷ್ಣಯ್ಯಾ…’ ಕೃತಿಯನ್ನು ಹಾಡಿದರು.

ಕೃಷ್ಣ ಇವರೊಂದಿಗೆ ಪತ್ನಿ ಸಂಗೀತಾ ಅವರೂ ಹಾಡಿದರು. ಬಳಿಕ ಪ್ರಸಾದ ಸ್ವೀಕರಿಸಿ ತೆರಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next