Advertisement
ಸ್ನೇಹ ಎನ್ನುವುದಕ್ಕೆ ಯಾವುದೇ ಬೇಧವಿಲ್ಲ. ಆ ಸಂಬಂಧದಲ್ಲಿ ಬರುವುದು ಕೇವಲ ಪ್ರೀತಿ ಹಾಗೂ ಸಹಾಯ. ಜೀವನದ ಕೆಲವು ಕಷ್ಟದ ಸಂದರ್ಭದಲ್ಲಿ ಬಂಧುಗಳು ಸಹಾಯ ಮಾಡದಿದ್ದರೂ ಸ್ನೇಹಿತರು ಸಹಾಯ ಮಾಡುತ್ತಾರೆ. ಉತ್ತಮ ಸ್ನೇಹದಿಂದಲೇ ಎಷ್ಟೋ ಜನರು ಜೀವನದಲ್ಲಿ ಸಾಕ್ಷಾತ್ಕಾರವನ್ನು ಪಡೆದುಕೊಂಡಿದ್ದಾರೆ. ಸ್ನೇಹ ಎನ್ನುವುದು ಇಂದು ನಿನ್ನೆಯ ವಿಚಾರವಲ್ಲ. ಮಹಾ ಪುರಾಣ ಕಥೆಗಳಲ್ಲೂ ದೇವಾನು ದೇವತೆಗಳು ಉತ್ತಮ ಸ್ನೇಹಿತರನ್ನು ಹೊಂದಿದ್ದರು ಎಂದು ಹೇಳಲಾಗುತ್ತದೆ. ಅವರ ಸ್ನೇಹ ಸಂಬಂಧಗಳೇ ಇಂದಿಗೂ ಮನುಜ ಕುಲಕ್ಕೊಂದು ದಾರಿದೀಪ ಎನ್ನಬಹುದು.
Related Articles
Advertisement
ಆಗ ದೇವರು ತಥಾಸ್ತು ಎಂದು ಹರಸಿದನು ಎಂದು ಹೇಳಿದನು. ಹೀಗೆಯೇ ಸುದಾಮನು ಶ್ರೀಕೃಷ್ಣನಿಗೆ ತಿಂಡಿಯನ್ನು ಹಂಚಿಕೊಳ್ಳದೆ ಇರುವುದಕ್ಕಾಗಿ ತನ್ನ ಜೀವನದಲ್ಲಿ ಕಷ್ಟವನ್ನು ಎದುರಿಸಬೇಕಾಯಿತು. ಬಡತನವು ಅವನನ್ನು ಕಿತ್ತು ತಿನ್ನುವಂತಾಗಿತ್ತು. ಈ ಕಥೆಯಿಂದ ತಿಳಿದು ಬರುವ ನೀತಿ ಏನೆಂದರೆ ಹಸಿದ ಮನುಷ್ಯ ಹಾಗೂ ಪ್ರಾಣಿಗಳಿಗೆ ಆಹಾರವನ್ನು ನೀಡಬೇಕು. ನಮ್ಮ ಸುತ್ತಲೂ ದೇವರು ಇರುತ್ತಾನೆ. ನಾವು ಏನನ್ನಾದರೂ ತಿನ್ನುವಾಗ ನಮ್ಮ ಸುತ್ತಲಿರುವವರಿಗೆ ಕೊಟ್ಟು ತಿನ್ನಬೇಕು.ಸುದಾಮನು ಬಹಳ ಬಡ ಕುಟುಂಬದಿಂದ ಬಂದವನಾಗಿದ್ದನು. ಕೃಷ್ಣ ಶ್ರೀಮಂತ ಮನೆಯಿಂದ ಬಂದವನು. ಇವರಿಬ್ಬರ ನಡುವೆ ಸಾಮಾಜಿಕವಾದ ವ್ಯತ್ಯಾಸ ಇದ್ದರೂ ಇವರ ಸ್ನೇಹ ಮಾತ್ರ ಉತ್ತಮವಾಗಿತ್ತು. ಇಬ್ಬರೂ ವಿದ್ಯಾಭ್ಯಾಸ ಮುಗಿಸಿ, ಮರಳಿದ ಮೇಲೆ ಸಂಪರ್ಕಗಳನ್ನು ಕಳೆದುಕೊಂಡಿದ್ದರು.
ಸುದಾಮನಿಗೆ ವಿವಾಹವಾಗಿತ್ತು. ಆತ ಕಷ್ಟದ ಜೀವನ ನಡೆಸುತ್ತಿದ್ದನು. ಬಡತನದಿಂದಾಗಿ ಹೆಂಡತಿ ಮತ್ತು ಮಕ್ಕಳನ್ನು ಸಾಕುವುದು ಕಷ್ಟವಾಗಿತ್ತು. ಊಟಕ್ಕೂ ಹಣವಿಲ್ಲದೆ ಕಷ್ಟಪಡುತ್ತಿದ್ದನು. ಆಗ ಅವನ ಹೆಂಡತಿ ಸುಶೀಲ ಸುದಾಮನಿಗೆ ಗೆಳೆಯ ಶ್ರೀಕೃಷ್ಣನ ಸಹಾಯ ಪಡೆಯಲು ನೆನಪಿಸಿದಳು. ಹೆಂಡತಿಯ ಮಾತಿಗೆ ಒಪ್ಪಿಕೊಂಡ ಸುದಾಮ ಕೃಷ್ಣನನ್ನು ಭೇಟಿಯಾಗಲು ಸಿದ್ಧನಾದನು. ಗೆಳೆಯನನ್ನು ಭೇಟಿಯಾಗಿ ಕೊಡಲು ಸುದಾಮನ ಬಳಿ ಏನೂ ಇರಲಿಲ್ಲ. ಕೃಷ್ಣನಿಗೆ ಇಷ್ಟವಾದ ಅವಲಕ್ಕಿ ಮನೆಯಲ್ಲಿ ಸ್ವಲ್ಪ ಇರುವುದು ನೆನಪಾಯಿತು. ಅದನ್ನೇ ಕೊಡಲು ನಿರ್ಧರಿಸಿ, ಕೊಂಡೊಯ್ದನು. ಕೃಷ್ಣನನ್ನು ಭೇಟಿಯಾದನು. ಹಳೆಯ ಸ್ನೇಹಿತನನ್ನು ಕಂಡು ಕೃಷ್ಣ ಬಹಳ ಸಂತೋಷಪಟ್ಟನು. ಕೃಷ್ಣನು ಸುದಾಮನಿಗೆ ಪ್ರೀತಿಯಿಂದ ಸತ್ಕಾರವನ್ನು ನೀಡಿದನು.
ಮೃಷ್ಟಾನ್ನ ಭೋಜನವನ್ನು ಸ್ವೀಕರಿಸಿದ ಸುದಾಮನು ಸ್ನೇಹಿತನಲ್ಲಿ ತನ್ನ ಕಷ್ಟವನ್ನು ಹೇಳದೆ ಸುಮ್ಮನಾದನು. ಜತೆಗೆ ತಾನು ತಂದ ಅವಲಕ್ಕಿಯನ್ನು ಕೊಡಲು ಹಿಂಜರಿದನು. ಆದರೆ ಸುದಾಮನ ಸ್ಥಿತಿ ಹಾಗೂ ಮನದಿಂಗಿತವನ್ನು ಅರಿತ ಕೃಷ್ಣನು, ಸುದಾಮನಲ್ಲಿ ಅವಲಕ್ಕಿಯನ್ನು ಕೇಳಿ ಪಡೆದನು. ಜತೆಗೆ ರುಕ್ಷ್ಮಿಣಿಯ ಬಳಿ ಲಕ್ಷ್ಮೀಯ ಅವತಾರ ತಾಳಿ, ಸುದಾಮನ ಕಷ್ಟಗಳನ್ನು ಪರಿಹರಿಸಲು ಹೇಳಿದನು.
ಬಂದಿರುವ ವಿಚಾರವನ್ನು ಕೃಷ್ಣನಿಗೆ ಹೇಳದೆಯೇ ಮನೆಗೆ ಹಿಂತಿರುಗಿದನು. ಆದರೆ ಸುದಾಮನು ಮನೆಗೆ ಬರುವಷ್ಟರಲ್ಲಿ ಮನೆಯ ಪರಿಸ್ಥಿತಿಗಳು ಬದಲಾಗಿದ್ದವು. ಹೆಂಡತಿ ಮಕ್ಕಳು ಉತ್ತಮ ಬಟ್ಟೆಯನ್ನು ತೊಟ್ಟಿದ್ದರು. ಜತೆಗೆ ಮನೆಯ ಸುಧಾರಣೆ ಹಾಗೂ ಬಡತನವು ನಿವಾರಣೆಯಾಗಿತ್ತು. ಉತ್ತಮ ಸ್ಥಿತಿಯಿಂದ ಕುಟುಂಬವು ಸುದಾಮನ ಆಗಮನಕ್ಕೆ ಕಾಯುತ್ತಿದ್ದರು. ಇದೆಲ್ಲವೂ ಕೃಷ್ಣನ ಲೀಲೆ ಎನ್ನುವುದನ್ನು ತಿಳಿದ ಸುದಾಮ ಮತ್ತು ಅವನ ಕುಟುಂಬದವರು ಕೃಷ್ಣನಿಗೆ ಧನ್ಯವಾದ ಸಲ್ಲಿಸಿದರು.