Advertisement
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅವರಿಗೆ ಇನ್ನೇನಾದರೂ (ಸ್ಥಾನಮಾನ) ಕೊಡಲು ಬಾಕಿಯಿದೆಯಾ? ರಾಜಕೀಯ ವ್ಯವಹಾರ ಅಲ್ಲ. ಪಕ್ಷದ ತತ್ವ ಸಿದ್ಧಾಂತ, ಕಾರ್ಯಕ್ರಮಗಳಿಗೆ ಹೊಂದಿಕೊಂಡು ಇರಬೇಕು. ಅಧಿಕಾರ ಬರುತ್ತೆ, ಹೋಗುತ್ತೆ. ಕೃಷ್ಣ ಅವರಿಗೆ ನೀಡಿದಷ್ಟು ಸ್ಥಾನಮಾನ ದಕ್ಷಿಣ ಭಾರತದ ಯಾವುದೇ ರಾಜಕಾರಣಿಗೆ ಸಿಕ್ಕಿಲ್ಲ ಎಂದು ಕುಟುಕಿದ್ದಾರೆ.
ಜನಾರ್ದನ ಪೂಜಾರಿ ಅವರಿಗೆ ಬುದ್ಧಿ ಹೇಳುವ ಸ್ಥಿತಿಯಲ್ಲಿ ನಾವಿದ್ದೇವೆಯೇ? ಅವರಿಗೆ ಅತೃಪ್ತಿಯಿದ್ದರೆ ಹೈಕಮಾಂಡ್ಗೆ ಬಂದು ಹೇಳಬೇಕು. ಆದರೆ ಅವರು ಈ ರೀತಿ ಮಾಡುತ್ತಿರುವುದು ಸಂಸ್ಕೃತಿಯಲ್ಲ. ಸಿದ್ದರಾಮಯ್ಯ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿ ಟೀಕಿಸುತ್ತಿರುವುದು ಸರಿಯಲ್ಲ ಎಂದರು.
——
ಬಿಜೆಪಿಗೆ ನೈತಿಕತೆಯಿಲ್ಲ: ಭೈರೇಗೌಡ
ಉದಯವಾಣಿ ದೆಹಲಿ ಪ್ರತಿನಿಧಿ: ಕೃಷ್ಣ ಅವರನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಟೀಕಿಸುತ್ತಾ ಅವರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಲು ಬಿಜೆಪಿ ಮುಂದಾಗಿರುವುದು ಸರಿಯಲ್ಲ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದರಲ್ಲಿ ವಾಜಪೇಯಿಗಿಂತಲೂ ಪ್ರಧಾನ ಭೂಮಿಕೆ ನಿಭಾಯಿಸಿದ್ದ ಎಲ್.ಕೆ. ಅಡ್ವಾಣಿ ಅವರನ್ನೇ ಬಿಜೆಪಿ ಮೂಲೆಗುಂಪು ಮಾಡಿದೆ. ಇವತ್ತು ಬಿಜೆಪಿ ಈ ಹಂತಕ್ಕೆ ಬೆಳೆದಿದ್ದರೆ ಅದಕ್ಕೆ ಅಡ್ವಾಣಿ ಕೊಡುಗೆ ಮಹತ್ವದ್ದು. ಆದರೆ ಬಿಜೆಪಿ ಅಡ್ವಾಣಿ ಅವರಿಗೇ ಗೌರವ ಕೊಟ್ಟಿಲ್ಲ. ಮೊದಲು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ ಎಂದು ತರಾಟೆಗೆ ತೆಗೆದುಕೊಂಡರು.