Advertisement

ಭೂಸನೂರ ತಾಂಡಾಕ್ಕೆ ಸೌಲಭ್ಯ ಕಲ್ಪಿಸಲು ಕ್ರಾಂತಿದಳ ಮನವಿ

12:19 PM Jan 10, 2022 | Team Udayavani |

ಆಳಂದ: ತಾಲೂಕಿನ ಭೂಸನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಭೂಸನೂರ ತಾಂಡಾದಲ್ಲಿ ಮೂಲ ಸೌಲಭ್ಯ ಒದಗಿಸಬೇಕು ಎಂದು ತಾಲೂಕು ಬಂಜಾರಾ ಕ್ರಾಂತಿದಳ ಘಟಕದ ಕಾರ್ಯಕರ್ತರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ರರು ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗ ಶಾಖೆ ಅಧಿಕಾರಿಗಳಿಗೆ ದಳದ ತಾಲೂಕು ಅಧ್ಯಕ್ಷ ವೆಂಕಟೇಶ ರಾಠೊಡ ನೇತೃತ್ವದಲ್ಲಿ ಕಾರ್ಯಕರ್ತರು ಮನವಿ ಸಲ್ಲಿಸಿ, ಬೇಡಿಕೆ ಈಡೇರಿಸುವಂತೆ ಕೋರಿದರು.

ಹಲವು ವರ್ಷಗಳಿಂದ ತಾಂಡಾದಲ್ಲಿ ಒಂದೇ ಪೈಪಲೈನ್‌ ವ್ಯವಸ್ಥೆಯಿದೆ. ಸುಮಾರು ವರ್ಷಗಳಿಂದ ಇದನ್ನು ದುರಸ್ತಿ ಮಾಡದೇ ಇರುವುದರಿಂದ ನೀರು ಕಲುಷಿತವಾಗಿ, ಕುಡಿಯಲು ಬಾರದಂತಾಗಿದೆ. ಆದ್ದರಿಂದ ಜನರಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಹೊಸ ಪೈಪ್‌ಲೈನ್‌ ವ್ಯವಸ್ಥೆ ಕಲ್ಪಿಸಬೇಕು. ವಾರದೊಳಗೆ ಬೇಡಿಕೆ ಈಡೇರದಿದ್ದರೆ ಸಂಬಂಧಪಟ್ಟ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ತಾಂಡಾದ ಪ್ರೇಮ ರಾಠೊಡ, ನಿಖೀಲ ರಾಠೊಡ, ಪಂಕಜ ರಾಠೊಡ, ಗಣೇಶ ರಾಠೊಡ ಮತ್ತಿತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next