Advertisement

ಕೆಪಿಎಲ್‌: ಬಳ್ಳಾರಿ ಟಸ್ಕರ್ಸ್‌ಗೆ 169 ರನ್‌ ಗುರಿ

06:00 AM Aug 18, 2018 | Team Udayavani |

ಬೆಂಗಳೂರು: ಆರು ವಿಕೆಟ್‌ಗಳನ್ನು 67 ರನ್‌ ಆಗುವಷ್ಟರಲ್ಲಿ ಕಳೆದುಕೊಂಡರೂ ಅರ್ಷದೀಪ್‌ ಸಿಂಗ್‌ ಬ್ರಾರ್‌ ಅವರ ಸಿಡಿಲಬ್ಬರ ಬ್ಯಾಟಿಂಗ್‌ ನೆರವಿನಿಂದ ಕೆಪಿಎಲ್‌ ಟಿ20 ಕ್ರಿಕೆಟ್‌ ಕೂಟದ ಶುಕ್ರವಾರದ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್‌ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್‌ 20 ಓವರ್‌ಗಳಲ್ಲಿ 8 ವಿಕೆಟಿಗೆ 168 ರನ್‌ ಪೇರಿಸಿದೆ.

Advertisement

7 ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಅರ್ಷದೀಪ್‌ 34 ಎಸೆತ ಎದುರಿಸಿ 68 ರನ್‌ ಬಾರಿಸಿದರು. ಇದರಲ್ಲಿ 8 ಪ್ರಚಂಡ ಸಿಕ್ಸರ್‌ ಹಾಗೂ ಒಂದು ಬೌಂಡರಿ ಸೇರಿತ್ತು. ಚೇತನ್‌ ವಿಲಿಯಮ್ಸ್‌ 22, ಭರತ್‌ ದೇವರಾಜ್‌ 19 ರನ್‌ ಮಾಡಿದರು. ಬಳ್ಳಾರಿ ಪರ ಪ್ರದೀಪ್‌ ಟಿ. 24 ರನ್‌ ವೆಚ್ಚದಲ್ಲಿ 3 ವಿಕೆಟ್‌ ಉರುಳಿಸಿದರು. ಬೆಳಗಾವಿ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದ ಹುಮ್ಮಸ್ಸಿನೊಂದಿಗೆ ಬೆಂಗಳೂರು ಬ್ಲಾಸ್ಟರ್ ಆಡಲಿಳಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next