Advertisement

ಕಾಂಗ್ರೆಸ್‌ ಬಲವರ್ಧನೆಗೆ ಶ್ರಮಿಸಲು ಪ್ರತಿಜ್ಞೆ

09:19 AM Jul 03, 2020 | Suhan S |

ಮಾನ್ವಿ: ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಪದಗ್ರಹಣ ಪ್ರತಿಜ್ಞಾ ದಿನ ಸಮಾರಂಭವನ್ನು ಪಟ್ಟಣದ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಮತ್ತು ಪಟ್ಟಣದ ಟಿಪ್ಪು ಸುಲ್ತಾನ್‌ ವೃತ್ತ, ಕೋನಾಪುರಪೇಟೆಯಲ್ಲಿ ಎಲ್‌ಇಡಿ ವಿಡಿಯೋ ಪ್ರಾಜೆಕ್ಟರ್‌ಗಳ ಮೂಲಕ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

Advertisement

ಪಟ್ಟಣದ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ವೀಕ್ಷಣೆಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಮುಖಂಡರು, ಕಾರ್ಯಕರ್ತರು ವೀಕ್ಷಿಸಿದರು. ನಂತರ ಸಾಮೂಹಿಕವಾಗಿ ಪ್ರತಿಜ್ಞೆ ಸ್ವೀಕರಿಸಿದರು. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ, ಸಮಾಜದಲ್ಲಿ ಸೌಹಾರ್ದ ಮೂಡಿಸಲು, ಸಂವಿಧಾನ, ಜಾತ್ಯತೀತತೆ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾಂಗ್ರೆಸ್‌ ಪಕ್ಷದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಪ್ರಮಾಣ ಮಾಡಿದರು. ಬೆಂಗಳೂರಿನ ಗೌಸ್‌ ಮೋಹಿನುದ್ದೀನ್‌, ಅಬ್ದುಲ್‌ ಗಫೂರ್‌, ಎ.ಬಾಲಾಸ್ವಾಮಿ ಕೊಡ್ಲಿ, ರಾಜಾ ವಸಂತ ನಾಯಕ, ಬಿ.ಕೆ.ಅಮರೇಶಪ್ಪ, ಸಬjಲಿಸಾಬ್‌, ಮಹಾಂತೇಶಸ್ವಾಮಿ ರೌಡೂರು, ಹುಸೇನ್‌ ಪಾಷಾ, ಯಂಕಯ್ಯ ಶೆಟ್ಟಿ, ಮುರಳಿಧರ ಶೆಟ್ಟಿ, ಹುಸೇನಪ್ಪ ಜಗ್ಲಿ, ಡಿ.ರಾಮಕೃಷ್ಣ, ಮೀನಾಕ್ಷಿ, ಲಕ್ಷಿ¾à ವಿರೇಶ, ಸಂತೋಷಮ್ಮ ಜಯಪ್ರಕಾಶ, ನಾರಾಯಣಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next