Advertisement

‘ಅರ್ಧಂಬರ್ಧ ಪ್ರೇಮಕಥೆ’ಹೇಳಲು ಬಂದ ಕೆ.ಪಿ.ಅರವಿಂದ- ದಿವ್ಯಾ ಉರುಡುಗ

05:48 PM Oct 08, 2022 | Team Udayavani |

ನಿರ್ದೇಶಕ ಅರವಿಂದ್‌ ಕೌಶಿಕ್‌ “ಅರ್ಧಂಬರ್ಧ ಪ್ರೇಮಕಥೆ’ ಎಂಬ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬೈಕ್‌ ರೇಸರ್‌ ಅರವಿಂದ್‌ ನಾಯಕರಾಗಿ ಲಾಂಚ್‌ ಆಗುತ್ತಿದ್ದಾರೆ. ಇವರಿಗೆ ಜೋಡಿಯಾಗಿ ದಿವ್ಯ ಉರುಡುಗ ನಟಿಸುತ್ತಿದ್ದಾರೆ. ಇತ್ತೀಚೆಗೆ ನಾಯಕ ಇಂಟ್ರೊಡಕ್ಷನ್‌ ಟೀಸರ್‌ ಬಿಡುಗಡೆಯಾಗಿದೆ.

Advertisement

ಪ್ರೀತಿ ಎನ್ನುವುದು ನಮ್ಮ ಕನಸುಗಳ ಜೊತೆಗೆ ಬೆಳೆಯುತ್ತದೆ. ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದು ಉಳಿಯೋದು ಕಷ್ಟ. ಏಕೆಂದರೆ ಅದು ನಮ್ಮ ಸುತ್ತಲಿನ ಸಮಾಜದ ಚೌಕಟ್ಟಿನಲ್ಲಿ ಬದುಕಬೇಕಾಗಿರುತ್ತದೆ. ಇಂಥ ಒಂದು ಕಥೆಯನ್ನು ಅರ್ಧಂಬಂರ್ಧ ಪ್ರೇಮಕಥೆಯಲ್ಲಿ ಹೇಳುತ್ತಿದ್ದಾರಂತೆ. ಈ ಚಿತ್ರದಲ್ಲಿ ಹಿರಿಯ ಕಲಾವಿದ ದ್ವಾರಕೀಶ್‌ ಅವರ ಪುತ್ರ ಅಭಿಲಾಷ್‌ ದ್ವಾರಕೀಶ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 25 ವರ್ಷಗಳ ನಂತರ ನಟನೆಗೆ ಹಿಂದಿರುಗಿದ್ದಾರೆ.

ನಿರ್ದೇಶಕ ಅರವಿಂದ್‌ ಕೌಶಿಕ್‌ ಮಾತನಾಡಿ, “ಚಿತ್ರದಲ್ಲಿ ಅರವಿಂದ್‌ ಅವರ ಬೈಕ್‌ ರೇಸಿಂಗ್‌ ಸಾಧನೆಗಳ ಬಗ್ಗೆ ಹೇಳಿಲ್ಲ. ನಾನು ಮಾಡಿಕೊಂಡ ಕಥೆಗೆ ಒಬ್ಬ ಹೊಸ ಹೀರೋ ಬೇಕಿತ್ತು. ಆತ ಜನ ಗುರುತಿಸುವಂಥ ಹೀರೋನೂ ಆಗಿರಬೇಕು ಅಂದುಕಡಾಗ ನೆನಪಿಗೆ ಬಂದಿದ್ದೇ ಕೆ.ಪಿ.ಅರವಿಂದ್‌. ಇದೊಂದು ಅಪ್ಪಟ ಪ್ರೇಮಕಥೆಯಾಗಿದ್ದು, ಶೂಟಿಂಗ್‌ ಮುಗಿದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದೆ’ ಎಂದು ಹೇಳಿದರು.

ಇದನ್ನೂ ಓದಿ:ವಿಮರ್ಶೆಗಳಷ್ಟೇ ಚಿತ್ರ ಚೆನ್ನಾಗಿರಲೆಂದು ನೋಡಲು ಕುಳಿತೆ,ಆದರೆ :ಕಾಂತಾರದ ಬಗ್ಗೆ ಕಿಚ್ಚನ ಮಾತು

ಹಿರಿಯ ನಟ ದ್ವಾರಕೀಶ್‌ ಕೂಡಾ ಸಿನಿಮಾ ತಂಡಕ್ಕೆ ಶುಭಕೋರಿದರು. ಬಕ್ಸಸ್‌ ಮೀಡಿಯಾ, ಲೈಟ್‌ ಹೌಸ್‌ ಮೀಡಿಯಾ ಮತ್ತು ಆರ್‌ಎಸಿ ವಿಷುವಲ್ಸ್‌ ಸೇರಿ ಈಚಿತ್ರವನ್ನು ನಿರ್ಮಿಸಿದ್ದಾರೆ. ಸೂರ್ಯ ಅವರ ಛಾಯಾಗ್ರಹಣ, ಸಂತೋಷ್‌ ರಾಧಾಕೃಷ್ಣನ್‌ ಅವರ ಶೀರ್ಷಿಕೆ ವಿನ್ಯಾಸದ ಜೊತೆಗೆ ಗ್ರಾಫಿಕ್ಸ್‌ ಕೆಲಸ ಮಾಡಿದ್ದಾರೆ.

Advertisement

ರ್ಯಾಪರ್‌ ಅಲೋಕ್‌, ಶ್ರೇಯಾ, ವೆಂಕಟ್‌ ಶಾಸ್ತ್ರಿ ಪ್ರದೀಪ್‌ ರೋಶನ್‌, ಸೂರಜ್‌ ಹೂಗಾರ್‌ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next