Advertisement

Kottigehara: ಮನೆ ಬಾಗಿಲಿಗೆ ಬಂದ ಕಾಡಾನೆ

11:08 AM Oct 09, 2024 | Team Udayavani |

ಕೊಟ್ಟಿಗೆಹಾರ: ದೇವನಗೂಳ ಗ್ರಾಮದಲ್ಲಿ ಮನೆ ಸಮೀಪವೇ ಕಾಡಾನೆ ಬಂದು ದಾಂಧಲೆ ನಡೆಸಿರುವ ಘಟನೆ ಅ.8ರ ಮಂಗಳವರ ರಾತ್ರಿ ನಡೆದಿದೆ.

Advertisement

ದೇವನಗೂಳ ಗ್ರಾಮದ ಬೆಳ್ಳಾಚಾರ್ ಮನೆಯ ಸುತ್ತಮುತ್ತ ಇದ್ದ ಬಾಳೆ, ತೆಂಗು, ಅಡಿಕೆ ಮರಗಳನ್ನು ಕಾಡಾನೆ ನಾಶ ಮಾಡಿದೆ. ಕೊಟ್ಟಿಗೆಹಾರ ಸುತ್ತಮುತ್ತ ಒಂದೆಡೆ ಅತಿಯಾದ ಮಳೆಗೆ ಕಾಫಿ, ಮೆಣಸು ಮೊದಲಾದ ಬೆಳೆಗಳು ನೆಲಕಚ್ಚಿದರೆ ಇನ್ನೊಂದೆಡೆ ಕಾಡಾನೆ ಕಾಟಕ್ಕೆ ಜನರು ಬೇಸತ್ತು ಹೋಗಿದ್ದಾರೆ.

ಆನೆಗಳಿಗೆ ಕಾಡಿನಲ್ಲಿ ಆಹಾರದ ಕೊರತೆ ಇರುವುದರಿಂದ ಊರಿನತ್ತ ಮುಖ ಮಾಡಿದೆ. ಅರಣ್ಯ ಇಲಾಖೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಬೆಳ್ಳಾಚಾರ್ ಆಗ್ರಹಿಸಿದ್ದಾರೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next