Advertisement

ತರುವೆ ಕ್ವಾರಂಟೈನರ್ಸ್‌ ಸ್ವಗ್ರಾಮಕ್ಕೆ ರವಾನೆ

01:38 PM May 25, 2020 | Naveen |

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಕೋವಿಡ್ ಪಾಸಿಟಿವ್‌ ಎನ್ನಲಾಗಿದ್ದ ವರದಿ ವಿವಿಧ ಹಂತದ ಮರು ಪರೀಕ್ಷೆಗಳಿಂದ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ತರುವೆಯ ಏಕಲವ್ಯ ವಸತಿ ಶಾಲೆಯ ಕ್ವಾರಂಟೈನ್‌ನಲ್ಲಿದ್ದ ವೈದ್ಯರೊಂದಿಗೆ ಪ್ರಥಮ ಹಂತದಲ್ಲಿ ಸಂಪರ್ಕದಲ್ಲಿದ್ದವರನ್ನು ಸ್ವಗ್ರಾಮಗಳಿಗೆ ಕಳಿಸಲಾಯಿತು.

Advertisement

ತರುವೆ ಏಕಲವ್ಯ ವಸತಿ ಶಾಲೆಯ ಕ್ವಾರಂಟೈನ್‌ನಲ್ಲಿ ಮಾಕೋನಹಳ್ಳಿ, ನಂದಿಪುರ, ಸಂಗಮಾಪುರ, ಕನ್ನಾಪುರದ 82 ಮಂದಿ ಇದ್ದರು. ಶನಿವಾರ ಮಧ್ಯಾಹ್ನದ ವೇಳೆಗೆ ವೈದ್ಯರ ಕೋವಿಡ್ ವರದಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಎಲ್ಲರನ್ನೂ ಮೂರು ಬಸ್ಸುಗಳಲ್ಲಿ ಸ್ವಗ್ರಾಮಕ್ಕೆ ಕಳಿಸಿಕೊಡಲಾಯಿತು. ಸ್ವಗ್ರಾಮಗಳಿಗೆ ತೆರಳುವ ಮುನ್ನ ಪತ್ರಿಕೆಯೊಂದಿಗೆ ಮಾತನಾಡಿದ ಸಂಗಮಾಪುರದ ಕಲಾವತಿ, ಕಳೆದ ಕೆಲ ದಿನಗಳಿಂದ ತರುವೆಯ ಏಕಲವ್ಯ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದೆವು. ಇಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ವೈದ್ಯರ ಕೋವಿಡ್ ವರದಿಯಲ್ಲಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ನಮ್ಮ ಮನೆಗೆ ಹೊರಟಿದ್ದೇವೆ ಎಂದರು.

ನೋಡೆಲ್‌ ಅಧಿಕಾರಿ ಮಲ್ಲಿಕಾರ್ಜುನ್‌, ಉಪ ತಹಶೀಲ್ದಾರ್‌ ರಾಜು, ಕಂದಾಯ ನಿರೀಕ್ಷಕ ಮಂಜುನಾಥ್‌, ಗ್ರಾಮ ಲೆಕ್ಕಾ ಧಿಕಾರಿ ಆನಂದ್‌, ತರುವೆ ಗ್ರಾಪಂ ಪಿಡಿಒ ಕೆ.ವಿ. ಶಾರದಾ, ಗ್ರಾಮ ಸಹಾಯಕ ಅಣ್ಣಪ್ಪ, ಪೂರ್ಣೇಶ್‌, ಸತೀಶ್‌, ಅರಣ್ಯ ಇಲಾಖೆಯ ಸಂತೋಷ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next