Advertisement

Kottigehara: ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಪ್ರಯಾಣಿಕರು ಪಾರು

04:22 PM Oct 14, 2023 | Team Udayavani |

ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಸುಂಕಸಾಲೆ ಬಳಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದು  ಕಾರಿನಲ್ಲಿದ್ದವರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹೊರನಾಡು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬರುವಾಗ ಈ ಅಪಘಾತವಾಗಿದ್ದು ಎರಡು ಕಾರುಗಳ ಮುಂಬಾಗ ಜಖಂ ಆಗಿದೆ. ಕೊಟ್ಟಿಗೆಹಾರ ಮತ್ತು ಹೊರನಾಡು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ.

Advertisement

ಕೊಟ್ಟಿಗೆಹಾರ ಮತ್ತು ಹೊರನಾಡು ಸಂಪರ್ಕಿಸುವ ರಾಜ್ಯ ಹೆದ್ದಾರಿ ಇದಾಗಿದ್ದು  ರಸ್ತೆ ಬದಿ ಗಿಡ ಗಂಟಿಗಳು ಬೆಳೆದಿರುವ ಕಾರಣ ಅಪಘಾತ  ಸಂಭವಿಸುತ್ತಿದೆ. ಕೂಡಲೇ ರಸ್ತೆ ಬದಿ ಬೆಳೆದಿರುವ ಗಿಡಗಂಟಿಗಳನ್ನು ಸಂಬಂಧ ಪಟ್ಟ ಅಧಿಕಾರಿಗಳು ತೆರವು ಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Thekkatte: ಕಳ್ಳರ ಜಾಡು ಹಿಡಿದು ಬೆನ್ನಟ್ಟಿ ಬಂದ ಅಟೋ ಚಾಲಕರ ತಂಡ

Advertisement

Udayavani is now on Telegram. Click here to join our channel and stay updated with the latest news.

Next