Advertisement

ಕೋಟೇಶ್ವರ ರೋಟರಿ: ಪೀಠೊಪಕರಣ ಹಸ್ತಾಂತರ, ವನಮಹೋತ್ಸವ

06:45 AM Aug 08, 2017 | Team Udayavani |

ಕೋಟೇಶ್ವರ:  ಕೋಟೇಶ್ವರ ರೋಟರಿ ವತಿಯಿಂದ ಗೋಪಾಡಿ ಪಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಉಪಯುಕ್ತವಾದ ಪೀಠೊಪಕರಣಗಳನ್ನು ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.

Advertisement

ಇದೇ ಸಂದರ್ಭದಲ್ಲಿ ಕುಂದಾಪುರ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ ಶಾಲಾ ಪರಿಸರದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. 

ಸಸ್ಯಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಅರಣ್ಯ ಅಧಿಕಾರಿ ದಿಲೀಪ್‌ ಅವರು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೋಟೇಶ್ವರ ರೋಟರಿ ಅಧ್ಯಕ್ಷ ನೇರಂಬಳ್ಳಿ ಪ್ರಕಾಶ್‌ ಆಚಾರ್‌ ಅವರು  ವಹಿಸಿ ಸ್ವಾಗತಿಸಿದರು.
ಈ ಸಂದರ್ಭ ರೋಟರಿ ಸದಸ್ಯರಾದ ಆನಂದ ಆಚಾರ್‌, ಪ್ರಭಾಕರ ಕುಂಭಾಶಿ, ನಾಗೇಶ್‌ ಶೆಟ್ಟಿಗಾರ್‌, ಗುಣಕರ ಶೆಟ್ಟಿ, ಸುರೇಶ್‌ ಶೆಟ್ಟಿ, ಗಣೇಶ್‌ ಭಟ್‌, ಗಣೇಶ್‌ ಆಚಾರ್‌, ಪ್ರಶಾಂತ್‌ ಆಚಾರ್‌, ಸುರೇಶ್‌ ಶೆಟ್ಟಿ, ಶಾಲಾ ಅಧ್ಯಾಪಕ ವೃಂದದವರು, ಗುತ್ತಿಗೆದಾರ ಗಣೇಶ್‌ ಪುತ್ರನ್‌, ಎಸ್‌. ಡಿ.ಎಂ.ಸಿ. ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ರೋಟರಿ ಕಾರ್ಯದರ್ಶಿ ಸತೀಶ್‌ ಆಚಾರ್‌ ಬೇಳೂರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next