Advertisement

ಕೋಟೇಶ್ವರ: ಕಟ್ಟುನಿಟ್ಟಾದ ಪೊಲೀಸ್‌ ಕ್ರಮಕ್ಕೆ ಒಗ್ಗಿಕೊಂಡ ಜನತೆ

10:55 PM Mar 30, 2020 | Sriram |

ಕೋಟೇಶ್ವರ: ಉಡುಪಿ ಜಿಲ್ಲಾಧಿಕಾರಿಗಳ ಆದೇಶ ಪರಿಪಾಲನೆಯಲ್ಲಿ ಅಂಗಡಿ ಮುಂಗಟ್ಟು ಹಾಗೂ ತರಕಾರಿ ಅಂಗಡಿಯವರು ಲೋಪವೆಸಗದಂತೆ ನೋಡಿಕೊಳ್ಳುವಲ್ಲಿ ಕುಂದಾಪುರ ಪೊಲೀಸರು ಕೋಟೇಶ್ವರ ಪರಿಸರದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.

Advertisement

ಬೆಳಗ್ಗೆ 7 ರಿಂದ 11 ಗಂಟೆ ತನಕ ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳ ವ್ಯಾಪರಕ್ಕೆ ಅವಕಾಶ ಕಲ್ಪಿಸಿರುವ ಪೊಲೀಸರು 11 ಗಂಟೆಯಾದೊಡನೆ ಎಲ್ಲ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿರುವುದು ಗ್ರಾಮಸ್ಥರಲ್ಲಿ ಕೋವಿಡ್‌ 19 ವೈರಸ್‌ ಭೀತಿ ಹಾಗೂ ಸಮಯ ಪರಿಪಾಲನೆಯ ಶಿಸ್ತು ಪರಿಪಾಠ ಮಾಡಿರುವುದು ಸಂಸ್ಕಾರಯುತ ಜೀವನ ಕ್ರಮಕ್ಕೆ ಹೊಸ ಆಯಾಮ ಸೃಷ್ಟಿಸಿದಂತಾಗಿದೆ.

ಮಕ್ಕಳಿಂದ ಮೊದಲ್ಗೊಂಡು ಯುವಕರು, ವಯೋವೃದ್ದರು ಸಹಿತ ಸಾಮಾಜಿಕ ಅಂತರ ಕಾಯ್ದು ಅಂಗಡಿಗಳ ಎದುರು ನಿಂತು ವ್ಯವಹಾರ ನಡೆಸುವುದರೊಡನೆ ಕಡ್ಡಾಯವಾಗಿ ಮಾಸ್ಕ್ ಧರಿಸಿರುವುದು ಪೊಲೀಸರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next