Advertisement

Kota Srinivas Poojary; ತೈಲ ದರ ಏರಿಕೆ ಜನ ವಿರೋಧಿ ನಡೆ

11:51 PM Jun 17, 2024 | Team Udayavani |

ಕುಂದಾಪುರ: ರಾಜ್ಯ ಸರಕಾರ ತೈಲ ದರ ಏರಿಸಿರುವುದು ಸರಿಯಲ್ಲ. ಇದು ಸಂಪೂರ್ಣವಾಗಿ ಜನವಿರೋಧಿ ನಡೆ. ಹಿಂದೆ ನಮ್ಮ ಸರಕಾರವಿದ್ದಾಗ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರು ವಾಹನಕ್ಕೆ ಹಗ್ಗ ಕಟ್ಟಿ ಎಳೆಯುವ ವ್ಯಂಗ್ಯದ ಹಳೆಯ ಫೋಟೋ ಕಂಡಿದ್ದೆ. ಹಾಗಾಗಿ ಈಗ ಅವರು ಪೆಟ್ರೋಲ್‌ ಬೆಲೆ ಏರಿಸಬಾರದಾಗಿತ್ತು. ದಿಢೀರ್‌ ಆಗಿ 3 -3.50 ರೂ. ಏರಿಸಿ ಬಿಟ್ಟರೆ, ಆಗುವಂಥ ದುಷ್ಪರಿಣಾಮಗಳ ಬಗ್ಗೆ ಯೋಚಿ ಸಬೇಕಿತ್ತು. ಅದನ್ನು ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಅವರು ಸೋಮವಾರ ಕುಂದಾಪುರದ ಮೂಡ್ಲ ಕಟ್ಟೆಯ ರೈಲು ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

ಮೂಡ್ಲಕಟ್ಟೆಯ ರೈಲು ನಿಲ್ದಾಣ ಮೇಲ್ದರ್ಜೆ, ಇನ್ನಷ್ಟು ರೈಲುಗಳ ನಿಲುಗಡೆ, ಕುಂದಾಪುರ ಹಾಗೂ ಬೆಂಗಳೂರು ನಡುವೆ ಪಡೀಲು ಬೈಪಾಸ್‌ ಮೂಲಕ ಹೊಸ ರೈಲು ಆರಂಭ ಮುಂತಾದ ಬೇಡಿಕೆಗಳನ್ನು ಕುಂದಾಪುರದ ಪ್ರಯಾಣಿಕರು ಮುಂದಿಟ್ಟಿದ್ದಾರೆ. ಇದರ ಕುರಿತು ಗಮನ ಹರಿಸ ಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next