Advertisement

14,000 ನಾಡದೋಣಿಗಳನ್ನು‌ ಮೀನುಗಾರಿಕೆಗೆ ಕಳಿಸಲು ತೀರ್ಮಾನ: ಕೋಟಾ ಶ್ರೀನಿವಾಸ ಪೂಜಾರಿ

09:12 AM Apr 12, 2020 | keerthan |

ಮಂಗಳೂರು: ಕೇಂದ್ರ ಸರಕಾರ ಮೀನುಗಾರಿಕೆ ನಡೆಸಲು ಅನುಮತಿ ‌ನೀಡಿದ್ದು ಸ್ವಾಗತಾರ್ಹ. ಕಡಲ ಮೀನುಗಾರಿಕೆ ಹಿತದೃಷ್ಟಿಯಿಂದ ಕೇಂದ್ರ ಈ ಆದೇಶ ನೀಡಿದೆ. 14,000 ನಾಡದೋಣಿಗಳನ್ನು‌ ಮೀನುಗಾರಿಕೆಗೆ ಕಳಿಸಲು ತೀರ್ಮಾನ ಮಾಡಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಸಾಮಾಜಿಕ ಅಂತರಕ್ಕೆ ಧಕ್ಕೆಯಾಗದಂತೆ ಮೀನುಗಾರಿಕೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. 14,000 ನಾಡದೋಣಿಗಳನ್ನು‌ ಮೀನುಗಾರಿಕೆಗೆ ಕಳಿಸಲು ತೀರ್ಮಾನ ಮಾಡಲಾಗಿದೆ. ನಾಡದೋಣಿ‌ಯಲ್ಲಿ ಕೇವಲ ಐದು ಮಂದಿಯೊಳಗಡೆ ಮಾತ್ರ ಹೋಗಬಹುದು. ಈ ನಾಡದೋಣಿಗಳು ಬೆಳಿಗ್ಗೆ ಹೋಗಿ ಸಂಜೆ ಹಿಂದೆ ಬರುತ್ತವೆ. ಮೀನುಗಾರಿಕೆ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯ ಎಂದರು.

ಈ ಕುರಿತಂತೆ ಶೀಘ್ರವೇ ನಿಯಮಾವಳಿಗಳನ್ನು ಪ್ರಕಟಿಸುತ್ತೇವೆ ಎಂದ ಅವರು, ಶುಕ್ರವಾರ ಕೇರಳದಿಂದ ದೋಣಿ ಮೂಲಕ ಮಂಗಳೂರಿಗೆ ಅಕ್ರಮ ಪ್ರವೇಶ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next