Advertisement

ಕೋಟ: ಬಸ್‌ ಢಿಕ್ಕಿ, ಪಾದಚಾರಿ ಸಾವು

08:39 PM Apr 22, 2023 | Team Udayavani |

ಕೋಟ: ಬಸ್‌ ಢಿಕ್ಕಿಯಾಗಿ ಪಾದಚಾರಿ ವೃದ್ಧ ಮೃತಪಟ್ಟ ಘಟನೆ ಕೋಟ ಬೊಬ್ಬರ್ಯನಕಟ್ಟೆ ಸಮೀಪ ಶನಿವಾರ ಸಂಭವಿಸಿದೆ.
ಬೇಳೂರು ಕೈಲೇರಿ ನಿವಾಸಿ ರಘುರಾಮ್‌ ಶೆಟ್ಟಿ ( 75) ಮೃತರು.

Advertisement

ಕೃಷಿಕರಾಗಿರುವ ಅವರು ಕೋಟ ಕೃಷಿ ಕೇಂದ್ರದ ಕಡೆ ತೆರಳುತ್ತಿದ್ದಾಗ ಕುಂದಾಪುರ ಕಡೆ ಚಲಿಸುತ್ತಿದ್ದ ಬಸ್‌ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ರಘುರಾಮ್‌ ಶೆಟ್ಟಿಯವರು ಸ್ಥಳದಲ್ಲೇ ಮೃತಪಟ್ಟರು.

ಅಪಘಾತವನ್ನು ತಪ್ಪಿಸುವ ಸಲುವಾಗಿ ಬಸ್‌ ಚಾಲಕ ಡಿವೈಡರ್‌ ಮೇಲ್ಗಡೆ ಬಸ್ಸನ್ನು ಹತ್ತಿಸಿದ್ದು, ವಿರುದ್ಧ ಢಿಕ್ಕಿಗೆ ಬಸ್‌ ಚಲಿಸಿ ನಿಂತಿದೆ. ಆದರೂ ಜೀವ ಹಾನಿ ತಪ್ಪಿಸಲಾಗಿಲ್ಲ.
ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸ್ಥಳೀಯರಾದ ಜೀವನ್‌ ಮಿತ್ರ ಬಳಗದವರು ಹಾಗೂ ಸ್ಥಳೀಯರು ಮೃತದೇಹ ಸ್ಥಳಾಂತರಿಸಲು ಸಹಕರಿಸಿದರು. ಸ್ಥಳಕ್ಕೆ ಕೋಟ ಠಾಣಾಧಿಕಾರಿ ಮಧು ಬಿ. ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next