Advertisement

Kota; ಕೊರಗ ಕಾಲನಿಯಲ್ಲಿ ಶ್ರೀನಿವಾಸ ಪೂಜಾರಿ ಮಂತ್ರಾಕ್ಷತೆ ಹಂಚಿಕೆ

01:35 AM Jan 10, 2024 | Team Udayavani |

ಕೋಟ: ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಕೊರಗ ಕಾಲನಿಗೆ ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಭೇಟಿ ನೀಡಿ ಅಯೋಧ್ಯೆಯ ಶ್ರೀರಾಮ ಮಂತ್ರಾಕ್ಷತೆ ವಿತರಿಸಿದರು.

Advertisement

ಈ ಸಂದರ್ಭ ಕೊರಗ ಕಾಲನಿಯ ಮಹಿಳೆಯರು ಆರತಿ ಬೆಳಗಿ ಮಂತ್ರಾಕ್ಷತೆಯನ್ನು ಭಕ್ತಿಯಿಂದ ಪಡೆದರು.

ಶ್ರೀರಾಮ ಪ್ರಾಣ ಪ್ರತಿಷ್ಠೆ ದಿನದಂದುತಾವುಗಳೆಲ್ಲ ಸ್ಥಳೀಯ ಕಾರ್ಯಕ್ರಮ ದಲ್ಲಿ ಭಾಗವಹಿಸುವುದಾಗಿ ತಿಳಿಸಿದರು ಮತ್ತು ತಮ್ಮ ಹಕ್ಕು ಪತ್ರ ಸಮಸ್ಯೆ ಕುರಿತುಅವರೊಂದಿಗೆ ಚರ್ಚಿಸಿದರು.

ಕೋಟ ತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್‌ ಕುಂರ್ದ,ಗ್ರಾ.ಪಂ. ಸದಸ್ಯರಾದ ಎಚ್‌.ಪ್ರಮೋದ್‌ ಹಂದೆ, ಪ್ರಕಾಶ್‌ ಹಂದಟ್ಟು, ಸೀತಾ , ಬಿಜೆಪಿ ಮುಖಂಡ ಪ್ರಥ್ವೀರಾಜ್‌ ಶೆಟ್ಟಿ ಬಿಲ್ಲಾಡಿ, ಕೋಟ ಸಿ.ಎ. ಬ್ಯಾಂಕ್‌ ನಿರ್ದೇಶಕ ರಂಜಿತ್‌ ಕುಮಾರ್‌, ಬಾರಿಕರೆ ಯುವಕ ಮಂಡಲದ ಅಧ್ಯಕ್ಷ ರವಿ ಕುಂದರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next